janadhvani

Kannada Online News Paper

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಯಶಸ್ವಿ ಸಮಾಪ್ತಿ

ಕಾರ್ಕಳ, ಸೆ.1: ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಇತ್ತೀಚೆಗೆ ತ್ವೆಬಾ ಗಾರ್ಡನ್ ಬಂಗ್ಲಗುಡ್ಡೆಯಲ್ಲಿ ಜಿಲ್ಲಾ ದಅವಾ ಕಾರ್ಯದರ್ಶಿ ಶಾಹುಲ್ ಹಮೀದ್ ನಈಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಯ್ಯಿದ್ ಜವಾದ್ ತಂಙಳ್ ರವರ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಸಯ್ಯಿದ್ ಫಝಲ್ ಜಿಫ್ರಿ ತಂಙಳ್ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ ಇದರ ಎಜ್ಯುಕೇಶನ್ ಡೈರಕ್ಟರ್ ಇಸ್ಮಾಯಿಲ್ ಸರ್ ಮಂಚಿ, ಉತ್ತಮ ತರಬೇತಿಯನ್ನು ನೀಡಿದರು.

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಬಂಗ್ಲಗುಡ್ಡೆ, ಮಾದ್ಯಮ ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ, ಕ್ಯೂಡಿ ಕಾರ್ಯದರ್ಶಿ ನವಾಝ್ ಕಾರ್ಕಳ, ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಅಂಜದಿ ಕಂಪಾನ್ ಉಪಸ್ಥಿತಿಯಿದ್ದರು.

ಕನ್ನಂಗಾರ್, ಮೂಳೂರ್, ಹಂಗಳೂರು, ಬಂಗ್ಲಗುಡ್ಡೆ ಸೇರಿದಂತೆ ನೂರಕ್ಕೂ ಮಿಕ್ಕ ದಅವಾ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಜಿಲ್ಲಾ ಪಬ್ಲಿಕೇಷನ್ ಕಾರ್ಯದರ್ಶಿ ಅನೀಸ್ ಸರ್ಹಿಂದಿ ಅಲ್ ಫಾಳಿಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.