janadhvani

Kannada Online News Paper

ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್: ದುಬೈನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

ದುಬೈ : ಅನಿವಾಸಿ ಕೊಡಗಿನ ಸಾಮಾಜಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಒಕ್ಕೂಟವಾದ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ವತಿಯಿಂದ ದುಬೈಯ ದೇರಾದಲ್ಲಿರುವ ಕೇಂದ್ರ ಕಚೇರಿಯಲ್ಲಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು KSWA ಜಿಸಿಸಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ವಹಿಸಿದರು.ಉದ್ಘಾಟನೆಯನ್ನು ಜಲೀಲ್ ನಿಝಾಮಿ ಎಮ್ಮೆಮಾಡು ನಿರ್ವಹಿಸಿದರೆ, ಶಾಫಿ ಸಖಾಫಿ ಕೊಂಡಂಗೇರಿ ಸಂದೇಶ ಭಾಷಣ ಮಾಡಿದರು.

ಸಂಘಟನೆಯ ಸಂಚಾಲಕ ಇಸ್ಮಾಯಿಲ್ ಮೂರ್ನಾಡು ಮಾತನಾಡಿ ನಾವೆಲ್ಲರೂ ಭಾರತೀಯರು ಆದರೆ ವಿದೇಶದಲ್ಲಿ ವೃತ್ತಿಯಲ್ಲಿ ತೊಡಗಿಸಿಕೊಂಡವರು ಆದರೂ ಕೂಡ ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾವು ಇಲ್ಲಿ ಇಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ನಮ್ಮ ಸಂವಿಧಾನ ರಕ್ಷಣೆ, ಜಾತ್ಯಾತೀತ ಮನೋಭಾವವನ್ನು ನಾವು ಬೆಳಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿಗೋಷ್ಠಿಗಳಲ್ಲಿ ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುತ್ತಾ ಕೆಲವರು ಅನಿವಾಸಿಗಳಾದ ನಮಗೆ ರಾಷ್ಟ್ರ ಪ್ರೇಮದ ಪಾಠ ಹೇಳಿಕೊಡುತಿದ್ದಾರೆ. ನಮಗೆ ರಾಷ್ಟ್ರದ ಬಗ್ಗೆ ಗೌರವವಿದೆ. ಯಾರ ಪಾಠ ಪ್ರವಚನಗಳ ಅಗತ್ಯವಿಲ್ಲವೆಂದರು.

ಈ ಸಂದರ್ಭ ಕೊಡಗಿನ ಅನಿವಾಸಿಗಳಾದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಕೋಶಾಧಿಕಾರಿ ಅಹ್ಮದ್ ಚಾಮಿಯಾಲ್, ಕ್ಯಾಬಿನೆಟ್ ನಾಯಕರಾದ ರಫೀಕ್ ಚಾಮಿಯಾಲ್, ಹಾರಿಸ್ ಕುಂಜಿಲ, ಸಲೀಂ ಗುಂಡಿಕೆರೆ, ಮುಝಮ್ಮಿಲ್ ಚಾಮಿಯಾಲ, ಝುಬೈರ್ ಎಮ್ಮೆಮಾಡು,, ಅಲಿ ಎಮ್ಮೆಮಾಡು, ಅಶ್ರಫ್ ಕುಂಜಿಲ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಿಯಾಝ್ ಕೊಂಡಂಗೇರಿ ಸ್ವಾಗತ ಹಾಗೂ ಕಾರ್ಯದರ್ಶಿ ಮುಜೀಬ್ ಕಡಂಗ ವಂದನಾರ್ಪಣೆ ನಿರ್ವಹಿಸಿದರು.