ನವದೆಹಲಿ: 12,000 ರೂಪಾಯಿಗಿಂತ (150 ಡಾಲರ್) ಕಡಿಮೆ ಬೆಲೆಯ ಚೀನಾದ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಮಾರಾಟ ಮಾಡದಂತೆ ನಿರ್ಬಂಧ ಹೇರಲು ಸರಕಾರ ಮುಂದಾಗಿದೆ.
ತತ್ತರಿಸಿರುವ ಪ್ರಾದೇಶಿಕ ಸ್ಮಾರ್ಟ್ಫೋನ್ ತಯಾರಿಕಾ ಕೈಗಾರಿಕೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಈ ಕ್ರಮ ಎನ್ನಲಾಗುತ್ತಿದೆ. ಇದರಿಂದಾಗಿ ಶವೋಮಿ ಕಾರ್ಪೊರೇಷನ್ ಸೇರಿದಂತೆ ದೇಶದಲ್ಲಿ ವ್ಯಾಪಿಸಿರುವ ಚೀನಾದ ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ.
ಜಗತ್ತಿನ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಕಡಿಮೆ ಬೆಲೆ ಶ್ರೇಣಿಯ ಸ್ಮಾರ್ಟ್ಫೋನ್ ಮಾರಾಟದಿಂದ ಚೀನಾದ ಬೃಹತ್ ಕಂಪನಿಗಳನ್ನು ದೂರ ಸರಿಸಲು ಕ್ರಮವಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯವಾಗಿ ತಯಾರಿಸುವ ಫೋನ್ಗಳಿಗಿಂತ ಕಡಿಮೆ ದರದಲ್ಲಿ ರಿಯಲ್ಮಿ ಮತ್ತು ಟ್ರಾನ್ಸಿಷನ್ ಫೋನ್ಗಳು ಗ್ರಾಹಕರಿಗೆ ತಲುಪುತ್ತಿವೆ. ಇದರಿಂದಾಗಿಯೂ ಪ್ರಾದೇಶಿಕ ಕೈಗಾರಿಕೆಯ ಮೇಲೆ ಪರಿಣಾಮ ಬೀರಿದೆ.
ಶವೋಮಿಯಂತಹ ಚೀನಾದ ಹಲವು ಕಂಪನಿಗಳು ಭಾರತದಲ್ಲಿ ಆರಂಭಿಕ ಶ್ರೇಣಿಯ ಫೋನ್ಗಳ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿವೆ. ಚೀನಾದಲ್ಲಿ ನಿರಂತರ ಕೋವಿಡ್-19 ಲಾಕ್ಡೌನ್ ನಿರ್ಬಂಧಗಳಿಂದಾಗಿ ಫೋನ್ಗಳ ಮಾರಾಟದ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಭಾರತದಲ್ಲಿ ಮಾರಾಟವು ಸತತ ಏರುಗತಿಯಲ್ಲಿದೆ.
2022ರ ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿ ಮಾರಾಟವಾಗಿರುವ ಸ್ಮಾರ್ಟ್ಫೋನ್ಗಳ ಪೈಕಿ ಮೂರನೇ ಒಂದರಷ್ಟು 12,000 ರೂಪಾಯಿಗಿಂತ ಕಡಿಮೆ ಶ್ರೇಣಿಯ ಫೋನ್ಗಳು. ಅವುಗಳಲ್ಲಿ ಶೇಕಡ 80ರಷ್ಟು ಫೋನ್ಗಳು ಚೀನಾದ ಕಂಪನಿಗಳಿಂದ ಬಂದಿರುವುದಾಗಿ ‘ಕೌಂಟರ್ಪಾಯಿಂಟ್’ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈಗೊಂಡಿರುವ ನಿರ್ಣಯವನ್ನು ಚೀನಾದ ಕಂಪನಿಗಳಿಗೆ ಅಧಿಕೃತ ನಿಯಮಾವಳಿಗಳ ಮೂಲಕ ನಿರ್ಬಂಧಗಳನ್ನು ಜಾರಿಗೊಳಿಸುತ್ತದೆಯೇ ಅಥವಾ ಇನ್ನಾವುದೇ ಮಾರ್ಗದಲ್ಲಿ ನಿಯಂತ್ರಣವನ್ನು ಹೇರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಶವೋಮಿ, ಓಪ್ಪೊ ಹಾಗೂ ವಿವೋ ಕಂಪನಿಗಳ ಹಣಕಾಸು ವಹಿವಾಟಿನ ಮೇಲೆ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯವು ಕಣ್ಣಿಟ್ಟಿದೆ. ಹಣ ಅಕ್ರಮ ವರ್ಗಾವಣೆ ಹಾಗೂ ತೆರಿಗೆ ವಂಚನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಆ ಕಂಪನಿಗಳ ಹಲವು ಕಚೇರಿಗಳಲ್ಲಿ ದಾಳಿ ನಡೆಸಲಾಗಿದೆ. ಈ ಹಿಂದೆ ಸರಕಾರವು ಹುವಾವೆ ಟೆಕ್ನಾಲಜೀಸ್ ಹಾಗೂ ಝಡ್ಟಿಇ ಕಾರ್ಪೊರೇಷನ್ ಕಂಪನಿಗಳ ಸಾಧನಗಳ ಮೇಲೆ ನಿಯಂತ್ರಣ ಹೇರಿದೆ. ಚೀನಾದ ಟಿಕ್ಟಾಕ್, ವಿಚ್ಯಾಟ್ ಸೇರಿದಂತೆ 300ಕ್ಕೂ ಅಧಿಕ ಅಪ್ಲಿಕೇಷನ್ಗಳನ್ನು ಭಾರತವು ನಿರ್ಬಂಧಿಸಿದೆ.
ಈ ಹೊಸ ಕ್ರಮದಿಂದ Apple ಅಥವಾ ಸ್ಯಾಮ್ಸಂಗ್ ಕಂಪನಿಗಳ ಫೋನ್ಗಳ ಮಾರಾಟಕ್ಕೆ ಅಡಚಣೆಯಾಗುವುದಿಲ್ಲ.
















ಇನ್ನಷ್ಟು ಸುದ್ದಿಗಳು
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ