ಮಂಗಳೂರು :ಇತ್ತೀಚೆಗೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಯವರು ಚಾಮರಾಜ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪಾಕಿಸ್ತಾನಿಗಳು ಹುಟ್ಟಿ ಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿ, ಕೇರಳ, ಮಂಗಳೂರು ದೆಹಲಿಯು ಭಯೋತ್ಪಾದನೆ ಕೇಂದ್ರಗಳ ಮೂಲ ಎಂಬಿತ್ಯಾದಿಯಾಗಿ ಶಿಕ್ಷಣ ತವರು ಮಂಗಳೂರು ಅನ್ನು ನಿಂದಿಸಿದ್ದಾರೆ.
ಮತೀಯ ವಿದ್ವೇಶ ಸೃಷ್ಟಿಸುವ ಸರ್ವ ಸಲಕರಣೆಗಳು ತಮ್ಮ ಬತ್ತಳಿಕೆಯಲ್ಲಿ ಖಾಲಿಯಾದಾಗ, ಪರಿವಾರಗಳಿಗಿರುವ ಉಳಿಕೆಯ ಅಸ್ತ್ರ , ಪ್ರಾದೇಶಿಕ ಮತೀಯ ಅಲ್ಪ ಸಂಖ್ಯಾತರನ್ನು ವಿದೇಶಿ ದೇಶಗಳೊಂದಿಗೆ ಸಮೀಕರಿಸಿ, ಈಗಾಗಲೇ ಗುಲಾಮೀಕರಣ ಗೊಳಿಸಿರುವ ಹಿಂದುಳಿದ ವರ್ಗ, ದಲಿತರು ಮತ್ತು ಬುಡಕಟ್ಟು ಜನರು, ತಮ್ಮ ಆಡಳಿತ ವೈಫಲ್ಯ, ಬೆಲೆಯೇರಿಕೆ, ನಿರುದ್ಯೋಗ ಇತ್ಯಾದಿಗಳ ಬಗ್ಗೆ ರೊಚ್ಚಿಗೆ ಏಳದಿರಲಿ ಎಂದು ಅವರ ಒಟ್ಟಾರೆ ಗಮನವನ್ನು ಅನಿವಾರ್ಯವಾಗಿ ಬೇರೆಡೆ ತಿರುಗಿಸುವ ಷಡ್ಯಂತ್ರವಾಗಿದೆ ಕೃಪಾ ಪೋಷಿತ ಲಿಖಿತ ಹೇಳಿಕೆ.
ಆರ್ಯ ಸೃಷ್ಟಿ, ಮುಸ್ಲಿಮ್ ಡಿಫೆನ್ಸ್ ಫೋರ್ಸ್ ಎಂಬ ಸಾಮಾಜಿಕ ಜಾಲ ತಾಣದ ಮೂಲಕ ವಿದ್ವೇಶ ಪ್ರಚಾರಗೊಳಿಸಿ ಆ ಮೂಲಕ ಈಗಾಗಲೇ ಅಸ್ವಸ್ಥಗೊಂಡ ಮಂಗಳೂರಿನಲ್ಲಿ ‘ ಮುತಾಲಿಕ ‘ ನನ್ನು ರಂಗಕ್ಕಿಳಿಸಿ ಮತೀಯ ಗಲಭೆ ಸೃಷ್ಟಿಸುವ ಹುನ್ನಾರ ಆಗಿದೆ. ಈ ಷಡ್ಯಂತ್ರದ ಹಿಂದೆ ಆರ್ಯ ಶಕ್ತಿ ಶ್ರಮವಿದೆ.
ಈ ಜಿಲ್ಲೆಯ ಬಿಲ್ಲವರು,ದಲಿತರು,ಬುಡಕಟ್ಟು ಜನಾಂಗ,ಕ್ರೈಸ್ತರು,ಮುಸ್ಲಿಮರೆಲ್ಲರು ಈ ಆರ್ಯ,ಬನಿಯಾಗಳ ಮಾಹ ಷಡ್ಯಂತ್ರವನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಷ್ಠ ತನಿಖಾ ಸಂಸ್ಥೆಗಳು ಮತ್ತು ಸ್ವತಂತ್ರ ಮಾಧ್ಯಮಗಳು ಈ ‘ ಸಂಘಟನೆಯ ‘ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಈ ಸಂಘಟನೆಯಲ್ಲಿ ಬಳಕೆ ಆಗಿರುವ ‘ ಮುಸ್ಲಿಮ್ ‘ ಪದ ನಕಲಿಯೇ ಎಂದು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ