janadhvani

Kannada Online News Paper

ಸಂತೋಷ್ ಸಾವು ಖೇದಕರ: ಈಶ್ವರಪ್ಪ ನೇರ ಹೊಣೆ, ಬಂಧನವಾಗಲಿ- ಕೆ.ಅಶ್ರಫ್

ಶಿವಮೊಗ್ಗದ ಹರ್ಷ ಸಾವಿನಲ್ಲಿ ಮೆರೆದ ಸಂಸ್ಕೃತಿ ರಕ್ಷಕರು ಗುತ್ತಿಗೆದಾರ ಸಂತೋಷ್  ಸಾವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ.

ಮಂಗಳೂರು: ಗುತ್ತಿಗೆದಾರ ಸಂತೋಷ್ ಈ ಹಿಂದೆಯೇ ತನ್ನ ಸ್ಥಿತಿಯ ಬಗ್ಗೆ ಬಹಿರಂಗ ಪಡಿಸಿದ್ದು, ಬಿಜೆಪಿ ಯ ಹೆಣ ರಾಜಕೀಯದ ಚೈತ್ರ ಯಾತ್ರೆ ಮುಂದುವರಿಯುತ್ತಿರುವುದಕ್ಕೆ ಸಂತೋಷ್ ಸಾವು ಸಾಕ್ಷಿ.

ಗುತ್ತಿಗೆದಾರ ಸಂತೋಷ್ ಸಾವು ಖೇದಕರ. ಹಿಂದುತ್ವದ ದ್ವೇಷ ರಾಜಕೀಯವನ್ನು ಮಾತ್ರವೇ ಉಸಿರಾಡುವ ಈಶ್ವರಪ್ಪ ಗುತ್ತಿಗೆದಾರ ಸಂತೋಷ್ ನಿಂದ 40% ಕಮಿಷನ್ ಅಪೇಕ್ಷಿಸಿ,ಬೇಡಿಕೆ ಇಟ್ಟ ಬಗ್ಗೆ ಈಗಾಗಲೇ ಪ್ರಧಾನ ಮಂತ್ರಿ ಮೋದಿಗೆ ಪತ್ರ ಬರೆದಿದ್ದರು. ಸಂತೋಷ್ ರನ್ನು ಒತ್ತಡಕ್ಕೆ ಸಿಲುಕಿಸಿ ಕೊಲೆ ಮಾಡಲಾಗಿದೆ.

ಇದೊಂದು ರಾಜ್ಯ ಸರಕಾರ ಪ್ರೇರಿತ ಕೊಲೆ. ಈ ಪ್ರಕರಣದಲ್ಲಿ ಸಚಿವರಾದ ಈಶ್ವರಪ್ಪ ನೇರ ಆರೋಪಿ, ಗೃಹ ಇಲಾಖೆ ಸಂತೋಷ್ ಸಾವಿಗೆ ಹೊಣೆ ಯಾಗಿಸಿ ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಈಶ್ವರಪ್ಪರನ್ನು ತಕ್ಷಣ ಬಂಧಿಸಿ ಕಾನೂನಿನ ಕುಣಿಕೆಗೆ ತರಬೇಕು. ಶಿವಮೊಗ್ಗದ ಹರ್ಷ ಸಾವಿನಲ್ಲಿ ಮೆರೆದ ಸಂಸ್ಕೃತಿ ರಕ್ಷಕರು ಗುತ್ತಿಗೆದಾರ ಸಂತೋಷ್ ಸಾವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಸಂಸ್ಕೃತಿ ರಕ್ಷಕರು ಮೆರೆಯುತ್ತಿರುವ ಸಾವಿನ ಬೆಲೆ, ಸಂತೋಷ್ ಸಾವಿನಲ್ಲಿ ಮೌಲ್ಯ ರಹಿತವಾಗದಿರಲಿ.

ಕೆ.ಅಶ್ರಫ್.
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.