janadhvani

Kannada Online News Paper

ಕೆ.ಸಿ.ಎಫ್ ಅಲ್ ಖಸೀಂ ಝೋನ್: 2022 ನೇ ಸಾಲಿನ ನವ ಸಾರಥಿಗಳು

ರಿಯಾದ್ :ಕರ್ನಾಟಕ ಅಲ್ ಖಸೀಂ ಝೋನ್ ಗೆ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ 2022 ಎಪ್ರಿಲ್ ಒಂದನೇ ಶುಕ್ರವಾರದಂದು ಖಯ್ಯುಂ ಉಸ್ತಾದ್ ಜಾಲ್ಸೂರು ರವರ ಅಧ್ಯಕ್ಷತೆಯಲ್ಲಿ ಅಲ್ ಮಿಸ್ಬಾಹ್ ಆಡಿಟೋರಿಯಂನಲ್ಲಿ ನಡೆಯಿತು.

ಝೋನ್ ದಾಯಿ ಯಾಅಕೂಬ್ ಉಸ್ತಾದರ ದುವಾದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ರಿಯಾದ್ ಝೋನ್ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಉದ್ಘಾಟಿಸಿದರು.
ಕಾರ್ಯದರ್ಶಿ ಅಬ್ದುಲ್ ಖಾದರ್ ಕಣ್ಣಂಗಾರ್ ವರದಿ ವಾಚಿಸಿದರು ಮತ್ತು ಕೋಶಾದಿಕಾರಿಗಳ ಅನುಪಸ್ಥಿತಿಯಲ್ಲಿ ಮಂಡಿಸಿದ ಲೆಕ್ಕ ಪತ್ರವನ್ನು ಸಭೆಯು ಒಕ್ಕೊರಳಿನಿಂದ ಅಂಗೀಕರಿಸಿತು.

ಕಳೆದ ಕಾಲಾವದಿಯಲ್ಲಿ ಸಂಘಟನೆಯ ಯಶಸ್ವಿಗಾಗಿ ಪರಿಶ್ರಮಿಸಿದ ಎಲ್ಲರನ್ನೂ ಕೃತಜ್ಞತೆ ಪೂರ್ವಕವಾಗಿ ಸ್ಮರಿಸುತ್ತಾ ನಡೆಸಿದ ಅಧ್ಯಕ್ಷರ ವಿದಾಯ ಭಾಷಣದ ನಂತರ, ಚುನಾವಣಾಧಿಕಾರಿಯಾಗಿ ಆಗಮಿಸಿದ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷ ಬಶೀರ್ ತಲಪಾಡಿ ಹಳೆ ಕಮಿಟಿಯನ್ನು ಬರ್ಖಾಸು ಮಾಡಿ ಈ ಕೆಳಗಿನ ಹೊಸ ಕಮಿಟಯನ್ನು ಆಯ್ಕೆ ಮಾಡಿದರು.

2022-23ರ ನವ ಸಾರಥಿಗಳು

ಅಧ್ಯಕ್ಷರು
ಮುಹಿಯದ್ದೀನ್ ಸಅದಿ ಅಮುಂಜೆ

ಪ್ರಧಾನ ಕಾರ್ಯದರ್ಶಿ
ಬಶೀರ್ ಕನ್ಯಾನ

ಕೋಶಾಧಿಕಾರಿ
ಇರ್ಷಾದ್ ಸಚ್ಚೇರಿಪೇಟೆ

ಸಂಘಟನಾ ಇಲಾಖೆ:
ಶಾಹುಲ್ ಹಮೀದ್ ಮಣ್ಣಾಪು
ಇಕ್ಬಾಲ್ ಪಾನೇಲ

ಶಿಕ್ಷಣ ಇಲಾಖೆ:
ಅಬ್ದುಲ್ ಕರೀಂ ಇಂದಾದಿ
ಹಸನ್ ಮದನಿ ಮಂಡೆಕೋಲು

ಸಾಂತ್ವನ ಇಲಾಖೆ:
ತಾಜುದ್ದೀನ್‌ ಕೆಮ್ಮಾರ
ಅಬ್ದುಲ್ಲ ಕೊಯಿಲ

ಪ್ರಕಾಶನ ಇಲಾಖೆ:
ರಶೀದ್ ಬೆಳ್ಳಾರೆ
ರಝಾಕ್ ನೆಕ್ಕಿಲ್

ಅಡ್ಮಿನ್ ಇಲಾಖೆ:
ಕಮಾಲ್ ಕೆ.ಸಿ.ರೋಡ್
ಸವಾದ್ ಚಿಕ್ಕಮಗಳೂರು

ಇಹ್ಸಾನ್ ಇಲಾಖೆ:
ಫೈಝಲ್ ಮಠ
ಅಬ್ಬಾಸ್ ಪುತ್ತೂರು

ಕಾರ್ಯಕಾರಿ ಸದಸ್ಯರು
ಯಾಕೂಬ್ ಸಖಾಫಿ
ಸಾಲಿ ಬೆಳ್ಳಾರೆ
ಖಯ್ಯುಂ ಜಾಲ್ಸೂರು
ಕಾದರ್ ಕಣ್ಣಂಗಾರ್
ಮುಸ್ತಫಾ ಹಾಸನ
ಅಬ್ದುಲ್ ಜಬ್ಬಾರ್
ಕಮರುದ್ದೀನ್ ಬಿ.ಸಿ ರೋಡ್
ಮೊೈದಿನ್ ಮೂಳೂರು
ನಝೀರ್ ಅಳಕೆ ಮಜಲ್
ನೌಷದ್ ಮಠ
ಇಂತಿಯಾಝ ದೇರಳಕಟ್ಟೆ
ನವಾಝ ಅಡ್ಯಾರ್
ಬಶೀರ್ ಬನ್ನೂರು

ಕೆ.ಸಿ.ಎಫ್ ಸೌದಿ ರಾಫ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಹಾಗೂ ದಾಯಿ ಯಾಕೂಬ್ ಸಖಾಫಿ ಶುಭ ಹಾರೈಸಿದರು.

ಕಾದರ್ ಕಣ್ಣಂಗಾರ್ ಸ್ವಾಗತಿಸಿ ಬಶೀರ್ ಕನ್ಯಾನ ವಂದಿಸಿದರು. ಯಾ ಅಕ್ರಮ ಬೈತಿನೊಂದಿಗೆ ಕೊನೆಗೊಳಿಸಲಾಯಿತು.