ಹಿಜಾಬ್ ವಿಷಯದಲ್ಲಿ ಇಂದು ನೀಡಿದ ತೀರ್ಪಿನಲ್ಲಿ ದು:ಖವಿದೆ.
ಆದರೂ ಕಾನೂನನ್ನು ಗೌರವಿಸಿ ತೀರ್ಪಿಗೆ ಮೌನಿಯಾಗಿದ್ದೇವೆ.
ಮೇಲ್ಮನವಿ ಮೂಲಕ ಮುಂದುವರಿದು ಕಾನೂನಾತ್ಮಕವಾಗಿ ನ್ಯಾಯ ತಂದುಕೊಡಲಿದ್ದೇವೆ ಎಂದು SKSSF ನಾಯಕ ಇಕ್ಬಾಲ್ ಬಾಳಿಲ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ತೀರ್ಪು ನೀಡಿ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿರುವುದು ಸಂವಿಧಾನ ವಿರೋಧ ಹೇಳಿಕೆಯಾಗಿರುತ್ತದೆ.
ಮತ್ತು ಹೀಗೆ ಹೇಳಲು ಕಾರಣವನ್ನು ಹೈಕೋರ್ಟ್ ಸಮಾಜದ ಮುಂದಿಡಬೇಕೆಂದು ಒತ್ತಾಯಿಸಿದ್ದಾರೆ.
ಶಿರವಸ್ತ್ರ ಧರಿಸುವುದು ಇಸ್ಲಾಮಿನ ಮೂಲಭೂತ ಹಕ್ಕುಗಳಾಗಿರುತ್ತದೆ. ಹಾಗೂ ಕಡ್ಡಾಯ ಕೂಡಾ ಆಗಿರುತ್ತದೆ.
ಈ ಬಗ್ಗೆ ಪರಿಶುದ್ದ ಖುರ್ಆನಿನಲ್ಲೇ ಉಲ್ಲೇಖ ಇರುವಾಗ ನ್ಯಾಯಲಯವು ಅವಿಭಾಜ್ಯ ಅಂಗವಲ್ಲ ಎಂದು ಹೇಳಲು ಕಾರಣವೇನು.?
ನಾಳೆ ಹೀಗೆ ಮುಂದುವರಿದು ಎಲ್ಲಿಯೂ ಹಿಜಾಬ್ ಧರಿಸಬಾರದು ಎಂದು ಹೇಳಿದರೂ ಅಚ್ಚರಿಪಡಬೇಕಾಗಿಲ್ಲ.
ಈ ಕುರಿತು ಸಮುದಾಯದ ಉಲಮಾ ಉಮರಾ ನಾಯಕರು ಒಗ್ಗಟ್ಟಾಗಿ ನಿಂತು ನ್ಯಾಯ ಒದಗಿಸಲು ಮುಂದಾಗಬೇಕಿದೆ.
ಪ್ರಬುದ್ದತೆಯಿಂದ ಎದುರಿಸಿ ಸಂವಿದಾನವನ್ನು ಉಳಿಸಲು ಪ್ರತಿಜ್ಞರಾಗಬೇಕಿದೆ ಎಂದು SKSSF ಟ್ರೆಂಡ್ ರಾಜ್ಯ ನಾಯಕ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.
ಇದು ಸಂವಿಧಾನ ವಿರುದ್ದದ ಹೇಳಿಕೆಯಾಗಿವೆ
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ