ವಿಟ್ಲ : ವಿಟ್ಲ ಮುಡ್ನೂರ್ ಗ್ರಾಮದ ಕಂಬಳಬೆಟ್ಟು ಮೋಹಿದ್ದೀನ್ ಮತ್ತು ಇಬ್ರಾಹಿಂ ಜಮಾತ್ ಕಮಿಟಿಯ ಜಂಟಿ ಮಸೀದಿಗಳ ಅವರಣಗೊಡೆ ಅಭಿವೃದ್ಧಿ ಹಾಗೂ ಕಂಬಳಬೆಟ್ಟು ಮದ್ರಸ ಆಧುನೀಕರಣಕ್ಕೆ ಮಾನ್ಯ ಮುಜುರಾಯಿ ಹಜ್ಜ್ ಮತ್ತು ವಕ್ಫ್ ಸಚಿವರರಾದ ಶ್ರೀಮತಿ ಶಶಿಕಲಾ ಜೊಲ್ಲೆ ಯವರನ್ನು ಜಮಾಅತ್ ನಿಯೋಗವು ಭೇಟಿ ನೀಡಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮುಹಿಯುದ್ದೀನ್ ಮತ್ತು ಇಬ್ರಾಹಿಂ ಜಮಾಅತ್ ಕಮಿಟಿ ಅಧ್ಯಕ್ಷರಾದ ಹಾಜಿ ಮೊಯಿದ್ದೀನ್ ಶಾಫಿ ಮತ್ತು ಜಮಾಅತ್ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ (ಸುನ್ನೀ) ಹಾಗೂ ಅಬ್ಬಾಸ್ ದಾಸರಬೆಟ್ಟು ಉಪಸ್ಥಿತರಿದ್ದರು. ಹಮೀದ್ ನೆಕ್ಕರೆ(ಹಮ್ಮಿ) ರವರು ಸಚಿವರ ಭೇಟಿಗೆ ಮುತುವರ್ಜಿ ವಹಿಸಿದ್ದರು.







