janadhvani

Kannada Online News Paper

ಬದ್ರಿಯಾ ಸ್ವಲಾತ್ ಕಮಿಟಿ ಕುಪ್ಪೆಪದವು- ನೂತನ ಅಧ್ಯಕ್ಷರಾಗಿ ಇಕ್ಬಾಲ್ ನಡುಪಲ್ಲ ಆಯ್ಕೆ

ಕುಪ್ಪೆಪದವು : ಬದ್ರಿಯಾ ಜುಮಾ ಮಸ್ಜಿದ್ ಇದರ ಅಂಗ ಸಂಸ್ಥೆ ಬದ್ರಿಯಾ ಸ್ವಲಾತ್ ಕಮಿಟಿ ಇದರ ವಾರ್ಷಿಕ ಮಹಾಸಭೆಯು ಜಮಾಅತ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಬದ್ರಿಯಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು..

ಸದ್ರಿ ಸಮಿತಿಯ ಗೌರವಾಧ್ಯಕ್ಷರಾಗಿ ಅಬೂಝೈದ್ ಶಾಫಿ ಮದನಿ ಕರಾಯ, ಅಧ್ಯಕ್ಷರಾಗಿ ಇಕ್ಬಾಲ್ ನಡುಪಲ್ಲ, ಉಪಾಧ್ಯಕ್ಷರಾಗಿ ತಾಜ್ ದಾರೇ ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಮಾಣಿಪಳ್ಳ , ಜೊತೆ ಕಾರ್ಯದರ್ಶಿಯಾಗಿ ಶಾನಿಬ್ ಪದವಿನಂಗಡಿ ,ಕೋಶಾಧಿಕಾರಿಯಾಗಿ ಅಬ್ದುಲ್ ಕಾದರ್ ಜೀಲಾನಿ ಆಯ್ಕೆಯಾದರು.

ಸದ್ರಿ ಸಮಿತಿಗೆ ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರ ಸಹಿತ 21 ಸದಸ್ಯರನ್ನು ನೇಮಕ ಮಾಡಲಾಯಿತು.
ಸಭೆಯ ಪ್ರಾರಂಭದಲ್ಲಿ ನಿಕಟ ಪೂರ್ವ ಕಾರ್ಯದರ್ಶಿ ರಾಝಿಕ್ ಮುನ್ನ ಸ್ವಾಗತಿಸಿ ನೂತನ ಕಾರ್ಯದರ್ಶಿ ಶಾಫಿ ಮಾಣಿಪಳ್ಳ ಧನ್ಯವಾದ ಗೈದರು.