janadhvani

Kannada Online News Paper

ನೈಟ್ ಕರ್ಫ್ಯೂ: ಎಲ್ಲಾ ರೀತಿಯ ಸಮಾರಂಭಗಳನ್ನು ರಾತ್ರಿ 10 ರೊಳಗೆ ಮುಗಿಸಬೇಕು- ಜಿಲ್ಲಾಧಿಕಾರಿ

ರಾತ್ರಿ ನಡೆಸುವಂತಹಾ ಉತ್ಸವ, ಯಕ್ಷಗಾನ, ಕಂಬಳ, ಉರೂಸ್ ಮುಂತಾದ ಯಾವುದೇ ಸಮಾರಂಭಗಳನ್ನು ರಾತ್ರಿ ಹತ್ತರೊಳಗೆ ಮುಗಿಸಬೇಕು

ಮಂಗಳೂರು,ಡಿ.28: ಓಮಿಕ್ರಾನ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನೈಟ್ ಕರ್ಫ್ಯೂ ಇಂದಿನಿಂದ ಆರಂಭಗೊಳ್ಳಲಿದೆ.

ರಾತ್ರಿ ಹತ್ತರಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶ ನೀಡಲಾಗುವುದಿಲ್ಲ, ಎಲ್ಲಾ ವಿಧ ಕಾರ್ಯಕ್ರಮಗಳನ್ನು ರಾತ್ರಿ ಹತ್ತರೊಳಗೆ ಕೊನೆಗೊಳಿಸಬೇಕೆಂದು ದ.ಕ.ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಪ್ರಸಾದ್ ಅವರು ಖಡಕ್ ಆದೇಶ ನೀಡಿದ್ದಾರೆ.

ರಾತ್ರಿ ನಡೆಸುವಂತಹಾ ಉತ್ಸವ, ಯಕ್ಷಗಾನ, ಕಂಬಳ, ಉರೂಸ್ ಮುಂತಾದ ಕಾರ್ಯಕ್ರಮಗಳನ್ನು ರಾತ್ರಿ ಹತ್ತರೊಳಗೆ ಮುಗಿಸಬೇಕು, ಇದರಲ್ಲಿ ಯಾವುದೇ ವಿನಾಯಿತಿಯಿಲ್ಲ ಎಂದು ಅವರು ಸೂಚಿಸಿದ್ದಾರೆ.

ಸರ್ಕಾರದ ನಿಯಮಾವಳಿಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಯವರು ನೆನಪಿಸಿದ್ದಾರೆ.