ಕಳೆದ ಎರಡು ವಾರಗಳಿಂದ ಕರ್ನಾಟಕ ಆಂಧ್ರಪ್ರದೇಶ ಕೇರಳ ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಇದರಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿ ರೈತರ ಜಮೀನುಗಳು ಜಲಾವೃತವಾಗಿವೆ. ಆಂಧ್ರಪ್ರದೇಶ ಒಂದರಲ್ಲಿಯೇ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿತ್ತು. ಆದರೆ ಪ್ರವಾಹದಿಂದಾಗಿ 26.67 ಲಕ್ಷ ಹೆಕ್ಟೇರ್ ಮೀಟರ್ನಷ್ಟು ಬೆಳೆ ನಾಶವಾಗಿದೆ. ಅದರಲ್ಲೂ ಹೆಚ್ಚು ಟಮೊಟೊ ಬೆಳೆ ಬೆಳೆಯುತ್ತಿದ್ದ ಮದನಪಲ್ಲಿ ಹಾಗೂ ಚಿತ್ತೂರು ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಉಂಟಾಗಿದೆ ಹೀಗಾಗಿ ಚಿತ್ತೂರು ಹಾಗು ಅನಂತಪುರ ಹಾಗೂ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಮಹಾರಾಷ್ಟ್ರದ ಸೋಲಾಪುರ, ಕೇರಳ ಸೇರಿ ಕೇವಲ ಕೆಲವು ರಾಜ್ಯಗಳಿಂದ ಮಾತ್ರ ಟೊಮೆಟೊ ಬೆಳೆ ದೇಶದ ಮೂಲೆ ಮೂಲೆಗೂ ರಫ್ತಾಗುತ್ತಿದೆ ಪರಿಣಾಮ ಟೊಮೊಟೊ ಬೆಲೆ ಸೇರಿ ಹಲವಾರು ತರಕಾರಿಗಳು ಬೆಳೆ ನಷ್ಟವಾಗಿದೆ.
ಇನ್ನು ಟೊಮೆಟೊ ಬೆಳೆಗೆ ಭಾರಿ ಬೇಡಿಕೆ ಬಂದಿದೆ. ಸದ್ಯ ಒಂದು ಕಡೆ ಟಮೋಟೊ ಬೆಳೆದು ಮಾರುಕಟ್ಟೆಗೆ ತರುತ್ತಿರುವ ರೈತರಿಗೆ, ಚಿನ್ನದಂತ ಲಾಭ ಸಿಕ್ತಾ ಇದ್ರೆ, ಇನ್ನು ಕೆಲವು ರೈತರು ಬೆಳೆ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಪ್ರತಿನಿತ್ಯ ಅಡುಗೆಗೆ ಬೇಕಾದ ಟೊಮೆಟೊ ಬೆಲೆ ಗಗನಕ್ಕೆ ಏರಿರುವುದರಿಂದ, ಗ್ರಾಹಕರು ತಲೆ ಬಿಸಿ ಮಾಡಿಕೊಂಡಿದ್ದಾರೆ.
ಪೆಟ್ರೋಲ್ ಡೀಸೆಲ್ ಗಿಂತಲೂ ದುಬಾರಿಯಾಗುತ್ತಿದೆ ಟಮೋಟೊ ಬೆಲೆ
ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಕೆಜಿ ಟೊಮೆಟೊಗೆ ಕೇವಲ 30ರಿಂದ 40 ರೂಪಾಯಿ ಬೆಲೆ ಇತ್ತು. ಆದರೆ ಕಳೆದೊಂದು ವಾರದಿಂದ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಲೀ. ಗೆ 100 ರೂಪಾಯಿ ಇದ್ರೆ, 1ಕೆಜಿ ಸೇಬಿನ ಹಣ್ಣಿನ ಬೆಲೆ 180 ರೂಪಾಯಿ ಇದ್ದು, ಟೊಮೆಟೋ ಹಣ್ಣು ಇದರ ದರವನ್ನು ಮೀರಿಸುತ್ತಿದೆ. ಕೆಲವು ಕಡೆ ಒಂದು ಕೆಜಿ ಟಮೊಟೊ ಹಣ್ಣಿಗೆ 200 ರೂಪಾಯಿಗಳಿಗಿಂತಲೂ ಅಧಿಕವಾದ ಬೆಲೆ ಇದೆ. ಹೀಗಾಗಿ ವಾರದ ಹಿಂದೆ ಎಲ್ಲಾ ಅಂಗಡಿಗಳಲ್ಲೂ ಸುಲಭವಾಗಿ ಸಿಗುತ್ತಿದ್ದ ಟೊಮೇಟೊ ಈಗ ಬಹುತೇಕ ಅಂಗಡಿಗಳಲ್ಲಿ ಲಭ್ಯವಾಗುತ್ತಿಲ್ಲ.
ಕರ್ನಾಟಕದಲ್ಲಿ 150ರ ಗಡಿಗೆ ಬಂದು ತಲುಪಿದ ಟೊಮೇಟೊ.
ಸದ್ಯ ಕರ್ನಾಟಕದಲ್ಲಿ ಒಂದು ಲೀ. ಪೆಟ್ರೋಲ್ ಬೆಲೆಗೆ 100 ರೂಪಾಯಿ ಬೆಲೆ ಇದೆ. ಆದರೆ ಇದನ್ನು ಮೀರಿಸುವಂತೆ ಪ್ರಸ್ತುತ ಕರ್ನಾಟಕದಲ್ಲಿ ಟೊಮೆಟೊ ಬೆಲೆ 145 ರೂಪಾಯಿಯಾಗಿದೆ.. ಇನ್ನು ಚೆನ್ನೈನಲ್ಲಿ ಒಂದು ಕೆಜಿ ಟೊಮೊಟೊ ಬೆಲೆ 140 ರಿಂದ 160 ರೂಪಾಯಿಗಳಿಗೆ ಬಂದು ತಲುಪಿದೆ. ಭೂಪಾಲ್ ಮಾರುಕಟ್ಟೆಗಳಲ್ಲಿ 1ಕೆಜಿ ಟೊಮೆಟೊ ಬೆಲೆ 80 ಯಾಗಿದೆ.ಇನ್ನು ಆಂಧ್ರಪ್ರದೇಶದಲ್ಲಿ ಕೆಜಿ ಟೊಮೆಟೊ ಬೆಲೆ 130 ರೂಪಾಯಿ ಇದ್ದು ವಿಜಯವಾಡ, ಕಿತ್ತೂರು ಸೇರಿದಂತೆ ಹಲವು ಕಡೆ ಟೊಮೆಟೊ ಬೆಲೆ 150 ರೂಪಾಯಿ ಸಮೀಪಿಸಿದೆ..
ಕೊಯಂಬತ್ತೂರಿನಲ್ಲಿ ಕುಸಿತ ಕಂಡ ಟೊಮೆಟೊ ಬೆಲೆ
ದೇಶದ ಹಲವು ಭಾಗಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗುತ್ತಿದ್ರೆ,ಕೊಯಮತ್ತೂರಿನ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕುಸಿತವಾಗಿದೆ. 25 ಕೆಜಿ ಟೊಮೆಟೊಗೆ 2300 ರೂಪಾಯಿ ಇದ್ದ ಬೆಲೆ 1600 ರೂಪಾಯಿಗಳಿಗೆ ಕುಸಿತ ಕಂಡಿದೆ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ