ಅಬುಧಾಬಿ: ದ್ವೇಷ ಪೂರಿತ ವಾರ್ತೆಗಳ ಮೂಲಕ ನಿರಂತರ ವಿವಾದ ಸೃಷ್ಟಿಸಿದ ಝೀ ನ್ಯೂಸ್ ಎಡಿಟರ್ ಇನ್ ಚೀಫ್ ಸುಧೀರ್ ಚೌಧರಿಯನ್ನು ಅಬುಧಾಬಿಯ ಕಾರ್ಯಕ್ರಮದಿಂದ ಹೊರಗಿಡಲಾಗಿದೆ ಎಂಬುದಾಗಿ ವರದಿಯಾಗಿದೆ. ರಾಜಕುಮಾರಿ ಹಿಂದ್ ಫೈಸಲ್ ಅಲ್ ಖಾಸಿಂ, “ತನ್ನ ಶಾಂತಿಯ ನಾಡಿಗೆ ಅಸಹಿಷ್ಣುವಾದ ಈ ಭಯೋತ್ಪಾದಕನನ್ನು ಏಕೆ ಕರೆತರುತ್ತಿದ್ದೀರಿ? ಯುಎಇಗೆ ಇಂತಹ ದ್ವೇಷಿಗಳನ್ನು ಸ್ವಾಗತಿಸುವುದಿಲ್ಲ” ಎಂದು ಹಿಂದ್ ಟೀಟ್ ಮಾಡಿದ್ದರು.
ಅಬುದಾಭಿ ಚಾರ್ಟೆಡ್ ಅಕೌಂಟ್ ಒಕ್ಕೂಟವು ನವೆಂಬರ್ 25, 26ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರನಾಗಿ ಚೌಧರಿಯವರಿಗೆ ಆಹ್ವಾನ ನೀಡಲಾಗಿತ್ತು. ರಾಜಕುಮಾರಿ ವಿರೋಧ ವ್ಯಕ್ತಪಡಿಸಿದ ಬೆನ್ನಿಗೆ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದ್ದು, ಇದನ್ನು ರಾಜಕುಮಾರಿಯವರೇ ತಿಳಿಸಿದ್ದಾರೆ.
ಸಿಎಎ ವಿರೋಧಿ ಹೋರಾಟವನ್ನು ಸುದೀರ್ ಭಯೋತ್ಪಾದನೆ ಎಂಬಂತೆ ಚಿತ್ರಿಕರಿಸಿದ್ದರು. ಕೊರೋನದ ಆರಂಭಿಕ ಕಾಲದಲ್ಲಿ ತಬ್ಲೀಗ್ ಜಮಾಅತ್ ವಿರುದ್ಧ ಝೀ ನ್ಯೂಸ್ ನಿಂತರ ತೇಜೋವಧೆ ನಡೆಸಿತ್ತು. ಭೂಮಿ ಜಿಹಾದ್, ಲವ್ ಜಿಹಾದ್ ಮುಂತಾದ ಸುಳ್ಳು ವರದಿಯನ್ನು ತನ್ನ ಚ್ಯಾನೆಲ್ ಮೂಲಕ ಚೌಧರಿ ನಿರಂತರ ಪ್ರಸಾರ ಮಾಡಿದ್ದರು.
“ಸುಧೀರ್ ಚೌಧರಿಯ ಅಬುಧಾಬಿ ಚಾರ್ಟೆಡ್ ಅಕೌಂಟೆಂಟ್ ಪ್ಯಾನೆಲ್ ಹೊರಗಿಟ್ಟಿದೆ ಎಂದು ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್್ರ ಅಕೌಟೆಂಟ್ ಆಫ್ ಇಂಡಿಯಾ(ಐಡಿಎಐ) ಅಬುಧಾಬಿ ಚಾಪ್ಟರ್ ಸದಸ್ಯರು ಬರೆದ ಪತ್ರದ ಪ್ರತಿಯನ್ನೂ ರಾಜಕುಮಾರಿ ಟೀಟ್ ಮಾಡಿದರು.
“ನಕಲಿ ವರದಿಗಳು, ಇಸ್ಲಾಮೊಫೋಬಿಯ ಕೋಮು ವಿದ್ವೇಷ, ನಕಲಿ ದಾಖಲೆ ತಯಾರು ಮಾಡಿದ ವಿಷಯದಲ್ಲಿ ಚೌಧರಿ ಆರೋಪಿಯಾಗಿದ್ದಾರೆ. ಪ್ರಮುಖ ಪ್ರೊಪೇಶನಲ್ ಸಂಘಟನೆ, ಪ್ರೊಫೆಶನಲ್ ಅಲ್ಲದ ಒಬ್ಬ ಪತ್ರಕರ್ತನಿಗೆ ವೇದಿಕೆ ನೀಡಿ ನಮ್ಮ ನಾಡಿನ ಗೌರವ, ಅಂತಸ್ತನ್ನು ಕಡಿಮೆ ಮಾಡುವುದಾ ಎಂದು ರಾಜಕುಮಾರಿ ಪ್ರಶ್ನಿಸಿದ್ದಾರೆ. ನಂತರ ಸುಧೀರ್ ಚೌಧರಿಯವರನ್ನು ಕಾರ್ಯಕ್ರಮದಿಂದ ಹೊರಗಿಡಲಾಯಿತು. ಎಂದು ರಾಜಕುಮಾರಿ ಟೀಟ್ ಮಾಡಿದ್ದಾರೆ.
ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟು ಕಠೋರ ಇಸ್ಲಾಮೋ ಪೋಬಿಕ್ ಶೋಗಳಿಗೆ ಹೆಸರುವಾಸಿಯಾದ ಬಲಪಂಥೀಯ ಆ್ಯಂಕರ್ ಖ್ಯಾತಿಗೆ ಸುಧೀರ್ ಚೌಧರಿ ಹೆಸರುವಾಸಿಯಾಗಿದ್ದಾರೆ. ಅವರ ಪ್ರೈಂ ಟೈಮ್ ಶೋಗಳು ಮುಸ್ಲಿಮರನ್ನು ಆಕ್ರಮಿಸಲು ಪ್ರೇರೇಪಿಸುವ ರೀತಿಯಲ್ಲಿವೆ. ನೀವು ಯಾಕೆ ಅಸಹಿಷ್ಣುವಾದ ಒಬ್ಬ ಭಯೋತ್ಪಾದಕನನ್ನು ಯುಎಇಗೆ ಕರೆತರುವುದು. ಶಾಂತವಾದ ನನ್ನ ದೇಶಕ್ಕೆ ನೀವು ಇಸ್ಲಾಮೊಫೋಬಿಯ ಮತ್ತು ದ್ವೇಷವನ್ನು ಯಾಕೆ ತರುತ್ತಿದ್ದೀರಿ. ಎಂದು ರಾಜಕುಮಾರಿ ಟ್ವಿಟ್ ಮಾಡಿ ಪ್ರಶ್ನಿಸಿದ್ದರು.

















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ