ಮಂಗಳೂರು: SSF ಮುಡಿಪು ಸೆಕ್ಟರ್ ವ್ಯಾಪ್ತಿಗೊಳಪಟ್ಟ ಸುಬ್ಬಗುಳಿಯ ತಾಜುಲ್ ಉಲಮಾ ಜುಮಾ ಮಸೀದಿಗೆ ಕಿಡಿಗೇಡಿಗಳು ಹಾನಿಯುಂಟು ಮಾಡಲು ಯತ್ನಿಸಿದ್ದು ಮತ್ತು ಅಲ್ಲಿನ ಧರ್ಮಗುರುಗಳ ಮೇಲೆ ಹಲ್ಲೆಯತ್ನ ಘಟನೆಗೆ ಧಾವಿಸಿರುವುದನ್ನ ಖಂಡಿಸಿ ಮಸೀದಿ ಆವರಣದಲ್ಲಿ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ವತಿಯಿಂದ ಖಂಡನಾ ಸಭೆ ನಡೆಯಿತು.

ಸಭೆಯಲ್ಲಿ ಸುನ್ನೀ ಯುವಜನ ಸಂಘ, ಸುನ್ನೀ ಜಂಇಯತುಲ್ ಉಲಮಾ, ಸುನ್ನೀ ಜಂಇಯತುಲ್ ಮುಅಲ್ಲಿಮೀನ್, ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮೊದಲಾದ ಸಂಘಟನೆಗಳ ನೇತಾರರು ಭಾಗವಹಿಸಿ ಶಾಂತಿಯುತ ಪ್ರತಿಭಟನೆ ನಡೆಯಿತು.
SSF ಜಿಲ್ಲಾಧ್ಯಕ್ಷರಾಗಿರುವ ನವಾಝ್ ಸಖಾಫಿ ಉಸ್ತಾದರು ಜಿಲ್ಲೆಯಲ್ಲಿ ಕಮ್ಯುನಲ್ ಆಗಿರು ಇಂತಹ ಅಹಿತಕರ ಘಟನೆಗಳು ಹಲವಾರು ಜಾಗಗಳಲ್ಲಿ ನಡೆಯುತ್ತಿದೆ.ಸರಕಾರ ಎಚ್ಚೆತ್ತು ಕೊಳ್ಳದಿದ್ದಲ್ಲಿ ಆರಕ್ಷಕರು ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಇಂತಹ ಅನಾಹುತಗಳು ಇನ್ನಷ್ಟು ನಡೆಯಬಹುದು.ಈ ಕುರಿತು ಸರಿಯಾದ ಕ್ರಮ ಕೈಗೊಳ್ಳಬೆಕೆಂದು ಮನವಿ ಮಾಡಿದರು.

ಇಲ್ಲಿನ ಜನ ಐಖ್ಯತೆಯಲ್ಲಿ ಜೀವಿಸಲು ಪ್ರಾಮುಖ್ಯತೆಯನ್ನ ನೀಡುವವರಾಗಿದ್ದು ಸಾಹೋದರ್ಯತೆಯಿಂದ ಭಾಳುವ ಪ್ರದೇಶವಾಗಿದೆ, ಕಿಡಿಗೇಡಿಗಳಿಂದ ಅಶಾಂತಿ ಉಂಟಾಗಿದೆ.ಕೋಮುವಾದ ಪಸರಿಸು ಪ್ರಯತ್ನ ನಡೆದಿದೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸೆಕ್ಟರ್ ನ ಅಧ್ಯಕ್ಷರು ರಾಫಿಹ್ ಕಣ್ಣೂರು ಪೋಲೀಸ್ ಅಧಿಕಾರಿಗಳಿಗೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡರು.
ಕಾರ್ಯಕ್ರಮ ಮುಗಿದ ಬಳಿಕ ಸುಬ್ಬಗೋಳಿ ಯೂನಿಟ್ ನ ಅಧೀನದಲ್ಲಿ ಸೆಕ್ಟರ್ ಹಾಗೂ ಜಿಲ್ಲೆಯ ನಾಯಕರ ಸಮ್ಮುಖದಲ್ಲಿ ಠಾಣಾಧಿಕಾರಿಗಳಿಗೆ ಮನವಿ ಪತ್ರವನ್ನ ನೀಡಿದರು.







