janadhvani

Kannada Online News Paper

ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್: ಅನ್ಸಾರ್ ಸ‌ಅದಿ ಮಾಚಾರು ಪ್ರತಿಭೋತ್ಸವ ಸಮಿತಿ ಚೇರ್‌ಮೆನ್

ಉಜಿರೆ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಕರ್ನಾಟಕ ರಾಜ್ಯದ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ -2021 ಇದರ ಉಜಿರೆ ಸೆಕ್ಟರ್ ಇದರ ನಿರ್ವಾಹಣ ಸಮಿತಿ ಚೇರ್‌ಮೆನ್ ಆಗಿ ಅನ್ಸಾರ್ ಸ‌ಅದಿ ಮಾಚಾರು ಕನ್ವೀನರ್ ಆಗಿ ಎಂ.ಮುಬೀನ್ ಉಜಿರೆ ಆಯ್ಕೆಯಾಗಿದ್ದಾರೆ.

ವೈಸ್ ಚೇರ್‌ಮೆನ್ ಆಗಿ ಆಸಿಫ್ ಎಸ್.ಎ ವೈಸ್ ಕನ್ವೀನರ್ ಆಗಿ ಅನ್ವರ್ ಅತ್ತಾಜೆ, ಹಬೀಬ್ ಬೆಳಾಲು ಫೈನಾನ್ಸ್ ಸೆಕ್ರೆಟರಿಯಾಗಿ ಹಕೀಂ ಜಿ.ಕೆ ಕಕ್ಕಿಂಜೆ ಯವರನ್ನು ಆಯ್ಕೆ ಮಾಡಲಾಗಿದೆ.ಸದಸ್ಯರಾಗಿ ಎಂ.ಶರೀಫ್ ಬೆರ್ಕಳ, ಇಕ್ಬಾಲ್ ಮಾಚಾರು, ಅಬ್ದುಲ್ ಬಾಸಿತ್ ಹಿಮಮಿ ಸಖಾಫಿ ಬೆಳಾಲು, ಮಜೀದ್ ಅತ್ತಾಜೆ, ಶರ್ವಾನಿ ರಝ್ವಿ ನೆರಿಯ ಇವರನ್ನು ಆಯ್ಕೆಮಾಡಲಾಯಿತು.