ಸರ್ವ ಜನಾಂಗದ ಶಾಂತಿಯ ತೋಟವಾದ ಸ್ವತಂತ್ರ ಸುಂದರ ಭಾರತದ 75ನೇ ಸ್ವಾತಂತ್ರ್ಯೋತ್ಸವವು ಕೋವಿಡ್ ನಿಯಮಗಳಿಗನುಗುಣವಾಗಿ ಕನ್ಯಾನ ದುಲ್ ಪುಖಾರ್ ಕಚೇರಿ ಮುಂಬಾಗದಲ್ಲಿ ಬೆಳಿಗ್ಗೆ 9:00 ಗಂಟೆಗೆ ನಡೆಯಿತು.
ಗೌರವಧ್ಯಕ್ಷರಾದ ಅಬ್ದುಲ್ ಖಾದರ್ ಸಅದಿ ಉಸ್ತಾದ್ ಧ್ವಜಾರೋಹಣಗೈದರು ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾದ ರಹೀಂ ಚಡವು , ಕನ್ಯಾನ ಗ್ರಾಂ.ಪಂ.ಅಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್ ಹಾಗೂ ಗಲ್ಫ್ ಕಮಿಟಿ ಪದಾದಿಕಾರಿಗಳ ಸಹಿತ ಸದಸ್ಯರುಗಳು ಹಾಗೂ ಗಣ್ಯರು ಬಾಗವಹಿಸಿ ಯಶಸ್ವಿಗೊಳಿಸಿದರು.







