janadhvani

Kannada Online News Paper

ಅಳೇಕಲ ಸುನ್ನೀ ಸೆಂಟರ್: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಹರೋಣ

ಉಳ್ಳಾಲ : 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಪ್ರಯುಕ್ತ ಅಳೇಕಲ ಸುನ್ನೀ ಸೆಂಟರ್ ವಠಾರದಲ್ಲಿ SYS, SSF , SVS, RAINBOW ಜಂಟಿ ಸಹಭಾಗಿತ್ವದಲ್ಲಿ ದ್ವಜಾರೊಹಣ ಕಾರ್ಯಕ್ರಮ ನಡೆಯಿತು.

ಅಳೇಕಲ ಜುಮಾ ಮಸೀದಿ ಖತೀಬರಾದ ಶೈಖುನಾ ಪಟ್ಟಾಂಬಿ ಉಸ್ತಾದ್ ರವರು ದ್ವಜಾರೊಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷರಾದ U S ಹಂಝ ಹಾಜಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. SMO ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಸ್ತಾದ್ ರವರು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಿರು ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭಾ ಉಪಾಧ್ಯಕ್ಷರಾದ ಅಯ್ಯುಬ್ ಮಂಚಿಲ , ಕೌಂಸಿಲರ್ U.A ಇಸ್ಮಾಯಿಲ್, ಕೌಂಸಿಲರ್ ಅಸ್ಗರ್ ಅಲೀ, ಅಳೇಕಲ ಮದ್ರಸಾ ಸದರ್ ಸೆರ್ಕಲ ಸಖಾಫಿ ಉಸ್ತಾದ್, ಸುನ್ನೀ ಸೆಂಟರ್ ಚೇರ್ ಮೆನ್ ಹಫೀಝ್ ಅಲ್ ಫಾಳಿಲಿ ಸಹಿತ ಹಲವಾರು ಗಣ್ಯರು , ಕಾರ್ಯಕರ್ತರು ಭಾಗವಹಿಸಿದ್ದರು. ಅನ್ಸಾರ್ ಅಳೇಕಲ ಸ್ವಾಗತಿಸಿ ಜಾಫರ್ U.S ವಂದಿಸಿದರು.