janadhvani

Kannada Online News Paper

ಪೇರಿಮಾರ್: ಮಸ್ಜಿದುಲ್ ಖಿಳರ್,ಡಿ.ಯು.ಮದರಸ -75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಮಸ್ಜಿದುಲ್ ಖಿಳರ್ ಹಾಗೂ ದಾರುಲ್ ಉಲೂಂ ಮದರಸ ಮತ್ತು ಎಸ್. ವೈ. ಎಸ್ – ಎಸ್ ಎಸ್ ಎಫ್ ಪೇರಿಮಾರ್ ಯುನಿಟ್ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವು ಪೇರಿಮಾರ್ ಮಸೀದಿ ವಠಾರದಲ್ಲಿ ನಡೆಯಿತು.

ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್. ಬಿ ಧ್ವಜಾರೋಹಣ ನೆರವೇರಿಸಿ, ಸ್ಥಳೀಯ ಖತೀಬ್ ರಫೀಕ್ ಸ’ಅದಿ ಅಲ್ ಅಫ್ಳಲಿ ಮುಖ್ಯ ಪ್ರಭಾಷಣ ಮಾಡಿದರು. ಹನೀಫ್ ಇಂಜಿನಿಯರ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಿರು ಕವನ ವಾಚಿಸಿದರು.

ಸಂದರ್ಭದಲ್ಲಿ ಆಡಳಿತ ಸಮಿತಿ ಪದಾಧಿಕಾರಿಗಳು, ಎಸ್ ವೈ ಎಸ್ – ಎಸ್ ಎಸ್ ಎಫ್ ಪದಾಧಿಕಾರಿಗಳು, ನಾಡಿನ ಹಿರಿಯರು, ಮದರಸಾ ಅಧ್ಯಾಪಕರು, ಮದರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸದರ್ ಮುಅಲ್ಲಿಂ ಮುಹಮ್ಮದ್ ನಿಝಾಮಿ ಸ್ವಾಗತಿಸಿ ವಂದಿಸಿದರು.