janadhvani

Kannada Online News Paper

ಬೆಂಗಳೂರು ಸಿದ್ದೀಖಿಯಾ ದಅವಾ ಕಾಲೇಜು- 75 ನೇ ಸ್ವಾತಂತ್ರ್ಯ ದಿನಾಚರಣೆ

ಬೆಂಗಳೂರು: ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬೆಂಗಳೂರಿನ ಸಿದ್ದೀಖಿಯಾ ದಅವ ಕಾಲೇಜು ವತಿಯಿಂದ ಆಚರಿಸಲಾಯಿತು. ಬಶೀರ್ ಹಾಜಿ ಧ್ವಜಾರೋಹಣ ಮಾಡಿದರು. ಪ್ರಾಂಶುಪಾಲ ಅನಸ್ ಸಿದ್ದಿಕಿ ಕಾಮಿಲ್ ಸಖಾಫಿ ಸಿರಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿದ್ಯಾರ್ಥಿಗಳು ವಿವಿಧ ಭಾಷೆಗಳಲ್ಲಿ ಮುಖ್ಯ ಭಾಷಣ ಮಾಡಿದರು.ಸಂಶೀರ್ ಸಅದಿ ಈಶ್ವರಮಂಗಲ, ಬದ್ರುದ್ದೀನ್ ಸಅದಿ ಕೆಸಿ ರೋಡ್, ಹಬೀಬುಲ್ಲಾಹ್ ಸಖಾಫಿ ತಲಕ್ಕಿ, ಉಮೈರ್ ಸಖಾಫಿ ಕಳತ್ತೂರು, ಫೈಸಲ್ ಮುಈನಿ ಗಾಳಿಮುಖ, ಹುಸೈನ್ ರಹ್ಮಾನಿಯಾ, ಮುಹಮ್ಮದ್, ಹಮೀದ್ ಹಾಗೂ ನಾಗರಿಕರು ಭಾಗವಹಿಸಿದರು.