janadhvani

Kannada Online News Paper

ಕೆ.ಸಿ.ಎಫ್ ಬ್ಲಡ್ ಸೈಬೋ ಗೆ ಅಭಿನಂದನಾ ಪತ್ರ ಸಲ್ಲಿಸಿದ ಜುಬೈಲ್ ಜನರಲ್ ಆಸ್ಪತ್ರೆ

ದಮ್ಮಾಮ್ :ಸಾಂತ್ವನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕೆ.ಸಿ.ಎಫ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ
ರಕ್ತದಾನ ಮಾಡುವ ಮೂಲಕ ರೋಗಿಗಳಿಗೆ ಆಸರೆಯಾಗಿದ್ದಾರೆ.

ದಮ್ಮಾಮ್, ಜುಬೈಲ್ ಹಾಗೂ ಸೌದಿ ಅರೇಬಿಯಾದ ಯಾವುದೇ ಸ್ಥಳದಲ್ಲಿ ರಕ್ತದಾನ ಹಾಗು ಇನ್ನಿತರ ಸಾಂತ್ವನ ಕಾರ್ಯದಲ್ಲಿ ಕೆ.ಸಿ.ಎಫ್ ಸಂಘಟನೆ ಬಲಿಷ್ಟ ತಂಡವೊಂದನ್ನು ಕಟ್ಟಿ ಕಷ್ಟದಲ್ಲಿರುವ ಗಲ್ಫ್ ಕನ್ನಡಿಗರ ಕಣ್ಣೀರೊರೆಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಕೋವಿಡ್ ಹಾಗು ಇನ್ನಿತರ ರೋಗದಲ್ಲಿರುವ ರೋಗಿಗಳಿಗೆ ರಕ್ತದ ಅವಶ್ಯಕತೆಯ ಮನವಿ ಕೋರಿ ಬಂದಾಗ ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡವು ಕೂಡಲೇ ರಕ್ತದಾನ ಮಾಡಿ ಸ್ಪಂದಿಸುತ್ತಾ ಬಂದಿದೆ.

ವಿಶೇಷವಾಗಿ ಕಳೆದ ತಿಂಗಳು ಬಹಳ ಕಡಿಮೆ ಸಿಗುವ O ನೆಗಟೀವ್ ರಕ್ತವನ್ನು ಕೂಡಲೆ ವ್ಯವಸ್ಥೆಮಾಡಿ ದಾನ ಮಾಡಿದೆ. ಈ ಒಂದು ವ್ಯತ್ಯಸ್ಥ ಕಾರ್ಯಾಚರಣೆಯಿಂದ ಆಸ್ಪತ್ರೆ ಸಿಬ್ಬಂಧಿಗಳು ಹಾಗೂ ರೋಗಿಯ ಕುಟುಂಬಸ್ಥರು ಬ್ಲಡ್ ಸೈಬೋ ತಂಡವನ್ನು ಶ್ಲಾಘಿಸಿದ್ದಾರೆ.ಹಾಗು ಆಸ್ಪತ್ರೆಯ ವತಿಯಿಂದ ಅಭಿನಂಧನಾ ಪತ್ರವನ್ನು ನೀಡಿ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಕೆಸಿಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ರಶೀದ್ ಸಖಾಫಿ, ಝೋನ್ ಸಾಂತ್ವನ ಕನ್ವೀನರ್ ಭಾಷಾ ಗಂಗಾವಳಿ, ಹಾಗು ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡದ ನಾಯಕ ನೌಫಲ್ ಮುಲ್ಕಿ ಉಪಸ್ಥಿತರಿದ್ದರು.