ಮುಂಬಯಿ: ತಾವು ಯೆಮನ್ನಲ್ಲಿ ಜನಿಸಿದ್ದು ಎಂಬ ಗುಟ್ಟನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆಗಿನ ತಮ್ಮ ಸಂಬಂಧಕ್ಕೆ ಐತಿಹಾಸಿಕ ನಂಟು ಇದೆ ಎಂದು ಹೇಳಿಕೊಂಡಿದ್ದಾರೆ.
ಕತಾರ್ ಎಕನಾಮಿಕ್ ಫೋರಂನ ಸಂವಾದದಲ್ಲಿ ಮಾತನಾಡಿದ ಮುಕೇಶ್, “ನಿನ್ನ ಮೈಯಲ್ಲಿಅರೇಬಿಕ್ ರಕ್ತ ಹರಿಯುತ್ತಿದೆ ಎಂದು ನನ್ನ ತಂದೆ ಹೇಳುತ್ತಿದ್ದರು. ನಾನು ಜನಿಸಿದ್ದು ಯೆಮನ್ನಲ್ಲಿ. ಬಹುಶಃ ನನ್ನ ಹೆತ್ತವರು ಇಲ್ಲಿಗೆ ಪ್ರವಾಸ ಬಂದಿದ್ದಾಗ ನಾನು ಜನಿಸಿರಬಹುದು” ಎಂದು ಹೇಳಿದ್ದಾರೆ.
“ನನ್ನ ಕುಟುಂಬ ಕತಾರ್ ಜತೆ ಉತ್ತಮ ಬಾಂಧವ್ಯ ಹೊಂದಿದೆ. ಕತಾರ್ ರಾಜಮನೆತನದ ಬಗ್ಗೆ ನಮಗೆ ಹೆಮ್ಮೆ ಇದೆ. ಕ್ರೀಡೆ ಹಾಗೂ ಸಂಸ್ಕೃತಿಯಲ್ಲಿ ಕತಾರ್ ಮಾಡಿದ ಸಾಧನೆಗೆ ನನ್ನ ಪತ್ನಿ ಅಭಿಮಾನಿಯೇ ಆಗಿದ್ದಾಳೆ. ನನ್ನ ಮಗಳು ಸಹ ಕತಾರ್ ಫೌಂಡೇಷನ್ ಸಾಧನೆ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾಳೆ. ನಮ್ಮ ಇಡೀ ಕುಟುಂಬವೇ ಕತಾರ್ ಫೌಂಡೇಷನ್ ಹಾಗೂ ರಾಜಮನೆತನದ ಬಗ್ಗೆ ಹೆಮ್ಮೆಪಡುತ್ತದೆ” ಎಂದು ತಿಳಿಸಿದ್ದಾರೆ.
“ಅಷ್ಟೇ ಅಲ್ಲ, ಅರೇಬಿಕ್ ದೇಶಗಳ ಜತೆ ಭಾರತದ ಸಂಬಂಧ ಶತಮಾನಗಳಿಂದಲೂ ಉತ್ತಮವಾಗಿದೆ.
ಕತಾರ್ನಲ್ಲಿಯೇ ಸುಮಾರು ಏಳು ಲಕ್ಷ ಭಾರತೀಯರು ಇದ್ದಾರೆ. ಅವರೆಲ್ಲರೂ ಭಾರತಕ್ಕೆ ಕತಾರ್ ವಕ್ತಾರರಿದ್ದಂತೆ” ಎಂದು ತಿಳಿಸಿದ್ದಾರೆ.
ಡಿಜಿಟಲ್ ಪ್ರಾಮುಖ್ಯ ಕುರಿತು ಮಾತನಾಡಿದ ರಿಲಯನ್ಸ್ ಮುಖ್ಯಸ್ಥ, ”ಮನುಷ್ಯನಿಗೆ ಆಹಾರ, ಬಟ್ಟೆ, ವಸತಿಯಂತೆಯೇ ಸಂಪರ್ಕ ಹಾಗೂ ಸಂವಹನವೂ ಮೂಲಭೂತ ಅವಶ್ಯಕತೆಗಳಾಗಿವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ಮೂಲಸೌಕರ್ಯದ ಮಹತ್ವದ ಮನವರಿಕೆಯಾಗಿದೆ,” ಎಂದು ಹೇಳಿದ್ದಾರೆ
















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ