janadhvani

Kannada Online News Paper

ಕೇರಳದಂತೆ ಕರ್ನಾಟಕದಲ್ಲೂ ಅನಿವಾಸಿಗರಿಗೆ ಪ್ರತ್ಯೇಕ ವಾಕ್ಸಿನ್ ಪ್ರಮಾಣ ಪತ್ರ ನೀಡಲು ಡಾ| ಆರತಿಕೃಷ್ಣ ರವರಿಂದ ರಾಜ್ಯ ಸರಕಾರಕ್ಕೆ ಮನವಿ

ಭಾರತದಲ್ಲಿ ನೀಡುತ್ತಿರುವ Covishield ಲಸಿಕೆಯು ವಿದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಸೌದಿ ಅರೇಬಿಯಾದಲ್ಲಿ AstraZeneca ಎಂದು ಗುರುತಿಸಲ್ಪಡುತ್ತಿದೆ. ಇದರಿಂದಾಗಿ ಪ್ರಮಾಣ ಪತ್ರದಲ್ಲಿ AstraZeneca ಎಂದು ನಮೂದಿಸದಿದ್ದರೆ ಅನಿವಾಸಿಗರು ಸಂಕಷ್ಟಕ್ಕೊಳಗಾಗಬಹುದಾಗಿದೆ.

ಈ ಕಾರಣಕ್ಕಾಗಿ ಕೇರಳ ಸರಕಾರವು ಕೋವಿಡ್ ಲಸಿಕೆ ಪಡೆದ ಪ್ರವಾಸಿಗಳಿಗೆ ಪ್ರತ್ಯೇಕ ಪ್ರಮಾಣ ಪತ್ರವನ್ನು ನೀಡುತ್ತಿದ್ದಾರೆ. ಅದರಲ್ಲಿ ಲಸಿಕೆ ಪಡೆದವರ ಗುರುತಿನ ದಾಖಲೆಯಾಗಿ ಪಾಸ್ಪೋರ್ಟ್ ಸಂಖ್ಯೆನ್ನು ನಮೂದಿಸಲಾಗುತ್ತಿದೆ.

ಇದರಂತೆ ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಪ್ರಮಾಣ ಪತ್ರ ನೀಡಬೇಕೆಂದು ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷೆಯರಾದ ಡಾ| ಆರತಿಕೃಷ್ಣ ರವರು ರಾಜ್ಯ ಉಪ ಮುಖ್ಯಮಂತ್ರಿಗಳಾದ ಡಾ| ಅಶ್ವಥ್ ನಾರಾಯಣ್ ರವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.