janadhvani

Kannada Online News Paper

ಪಂಪ್ ವೆಲ್ ಆ. 3.ತಾಜುಲ್ ಫುಖಹಾಅ್ ಪ್ರಾರ್ಥನಾ ಸಂಗಮ ಯಶಸ್ವಿ ಗೆ ಎಸ್ ಇ ಡಿ ಸಿ ಕರೆ

ಮಂಗಳೂರು: ಸಮಸ್ತ ಕೇಂದ್ರ ಮುಶಾವರ ಸದಸ್ಯರು, ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ರು, ಉಡುಪಿ, ಹಾಸನ ,ಚಿಕ್ಕಮಗಳೂರು ಮತ್ತು ದ ಕ ಜಿಲ್ಲೆ ಯ ವಿವಿಧ ಭಾಗಗಳ ಸಂಯುಕ್ತ ಖಾಝಿ ಗಳಾದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಸ್ಮರಣೆ ಹಾಗೂ ಪ್ರಾರ್ಥನಾ ಸಂಗಮವು ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಆಶ್ರಯ ದಲ್ಲಿ ಆಕ್ಟೋಬರ್ 3 ರಂದು ಬೆಳಗ್ಗೆ 10.00 ಗಂಟೆಗೆ ಪಂಪ್ ವೆಲ್ ಮಸ್ಜಿದುತ್ತಖ್ವ ದಲ್ಲಿ ನಡೆಯಲಿದೆ .

ಈ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಲು ಎಸ್ ಇ ಡಿ ಸಿ ಪ್ರತ್ಯೇಕ ಕ್ಯಾಬಿನೆಟ್ ತುರ್ತು ಸಭೆ ಇಂದು ಇಲ್ಮ್ ಸೆಂಟರ್ ಪಡೀಲ್ ನಲ್ಲಿ ರಾಜ್ಯಧ್ಯಕ್ಷ ಕೆ ಕೆ ಎಂ ಕಾಮಿಲ್ ಅಧ್ಯಕ್ಷ ತೆಯಲ್ಲಿ ನಡೆಯಿತು. ಒ ಕೆ ಸ ಈದ್ ಮುಸ್ಲಿಯಾರ್ ದುಆದೊಂದಿಗೆ ಪ್ರಾರಂಭ ಗೊಂಡ ಸಭೆಯ ನ್ನು ಅತೂರು ಸ ಈದ್ ಮುಸ್ಲಿಯಾರ್ ಉದ್ಘಾಟಿಸಿದರು. ಹಾಫಿಳ್ ಹನೀಪ್ ಮಿಸ್ಬಾಯಿ ಮುಪತ್ತಿಸ್, ಹಮೀದ್ ಸ ಅದಿ ಮೂರುಗೋಳಿ,ಮುಹಮ್ಮದ್ ಸಖಾಫಿ ಸುರತ್ಕಲ್, ಮುತ್ತಲಿಬ್ ಸಖಾಫಿ ಸರಳಿಕಟ್ಟೆ ಸಮ್ಮುಖದಲ್ಲಿ ಕಾರ್ಯ ಕ್ರಮದ ಯಶಸ್ವಿಗಾಗಿ ಎಲ್ಲಾ ಕೆಳ ಘಟಕಗಳನ್ನು ಸಂಪಕಿಸಿ ಸೂಚನೆ ನೀಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜೆಪ್ಪು ಮದನಿ ಸ್ವಾಗತಿಸಿ, ಪಿ ಎಂ ಇಬ್ರಾಹಿಮ್ ನಯೀಮಿ ಮುಳೂರು ವಂದಿಸಿದರು.

ಇದನ್ನೂ ಓದಿರಿ...