janadhvani

Kannada Online News Paper

ಅಳಕೆಯಲ್ಲಿ ಮದ್ರಸಾ ಮಂತ್ರಿ ಮಂಡಲ ಹಾಗೂ ಎಸ್.ಬಿ.ಎಸ್ ಮಹಾಸಭೆ

ಬೆಳ್ತಂಗಡಿ: ಸಪ್ಟಂಬರ್ 13 ಆದಿತ್ಯವಾರ ಸಿರಾಜುಲ್ ಇಸ್ಲಾಂ ಮದ್ರಸ ಅಳಕೆಯಲ್ಲಿ ನೂತನ ಮಂತ್ರಿಮಂಡಲ ಹಾಗೂ ಎಸ್.ಬಿ.ಎಸ್ ವಾರ್ಷಿಕ ಮಹಾಸಭೆ ಅಬ್ದುರ್ರಝಾಖ್ ಸಖಾಫಿ ಕಲ್ಲೇರಿ ಯವರ ಪ್ರಾರ್ಥನೆಯೊಂದಿಗೆ RJM ಖತೀಬ್ ಡಿ.ಎಂ ಅಬ್ದುರ್ರಹ್ಮಾನ್ ಸಖಾಫಿ ನಾವೂರ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಸದರ್ ಮುಅಲ್ಲಿಂ ಮುಸ್ತಫಾ ಹಿಮಮಿ ಗೇರುಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ನೂತನ ಮಂತ್ರಿಮಂಡಲ ಚುನಾವಣೆ ಮೂಲಕ ಹಾಗೂ ಎಸ್.ಬಿ.ಎಸ್ ಕಾರ್ಯಾಕಾರಿ ಸಮಿತಿ ರಚಿಸಲಾಯಿತು. ಮದ್ರಸಾ
ಮುಖ್ಯಂತ್ರಿಯಾಗಿ ಅವ್ಸಾಫ್
ಉಪ ಮುಖ್ಯಮಂತ್ರಿಯಾಗಿ ಸಫ್ವಾನ್
ಆರೋಗ್ಯಮಂತ್ರಿಯಾಗಿ ಸಂಶೀರ್
ಲೈಬ್ರರಿ ಮಂತ್ರಿಯಾಗಿ ಶುಜಾಅ್
ಸ್ವಚ್ಛತಾ ಮಂತ್ರಿಯಾಗಿ ರಮೀಝ್
ನೀರಾವರಿ ಮಂತ್ರಿಯಾಗಿ ರಾಫಿ
ಫಂಡ್ ಮಂತ್ರಿಯಾಗಿ ಶಮ್ಮಾಸ್ ಆಯ್ಕೆಗೊಂಡರು.

ಎಸ್.ಬಿ.ಎಸ್ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಇಸ್ಮಾಯಿಲ್
ಉಪಾಧ್ಯಕ್ಷರು : ಸುಹೈಲ್
ಪ್ರಧಾನ ಕಾರ್ಯದರ್ಶಿ: ಶಮೀರ್
ಜೊತೆ ಕಾರ್ಯದರ್ಶಿಯಾಗಿ
ಸುಜಾಹ್, ತ್ವಯ್ಯಿಬ್
ಕೋಶಾಧಿಕಾರಿ: ಶಮ್ಮಾಸ್
ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ RJM ಅಧ್ಯಕ್ಷರಾದ ಅಬೂಬಕ್ಕರ್ M ಹಾಗೂ ಅಬ್ದುರ್ರಝಾಖ್ ಮದನಿ ಉಸ್ತಾದರು ಉಪಸ್ಥಿತಿಯಿದ್ದರು. ಶಮೀರ್ ಸ್ವಾಗತಿಸಿ ವಂದಿಸಿದರು.