janadhvani

Kannada Online News Paper

ಎಸ್ಸೆಸ್ಸೆಫ್ ಕಾರ್ಕಳ ಡಿವಿಶನ್ ಹೊಸ್ಮಾರಿನಲ್ಲಿ ಧ್ವಜ ದಿನಾಚರಣೆ

ಸಾತ್ವಿಕ‌ ಪರಂಪರೆ, ವಿದ್ವಾಂಸ ಸಾರಥ್ಯ, ನಿಷ್ಕಳಂಕ ಸೇವೆ ನವಕ್ರಾಂತಿಗೆ ಮುನ್ನುಡಿ ಬರೆದ SSF, ಕನ್ನಡ ಮಣ್ಣಿನಲ್ಲಿ ಜನ್ಮತಾಳಿದ ‘SSF ದ್ವಜ ದಿನ’ದ ಅಂಗವಾಗಿ ಉಡುಪಿ ಜಿಲ್ಲೆಯ ಕಾರ್ಕಳ ಡಿವಿಶನ್ ಹೊಸ್ಮಾರಿನಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಶಾಖಾಧ್ಯಕ್ಷ ಶರೀಫ್ ಮದನಿ,ಬೊಳ್ಳೊಟ್ಟು, ಮಾಜಿ ಡಿವಿಶನ್ ಪ್ರ.ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್,ಕಾರ್ಕಳ ಡಿವಿಶನ್ ಪ್ರ.ಕಾರ್ಯದರ್ಶಿ ಹಾರಿಸ್, ಯುನಿಟ್ ನಾಯಕರಾದ ಹನೀಫ್ ಡೊಂಕೊಟ್ಟು, ಎಮ್.ಎಚ್.ಸಲೀಂ ಯಾಕೂಬ್, ಡಿ.ಎಂ ಆಸೀಫ್, ಜಲೀಲ್, ಹಾಶಿರ್ ಹೊಸ್ಮಾರ್ ಮುಂತಾದವರು ಉಪಸ್ಥಿತರಿದ್ದರು.