ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕಕ್ಕೆಪದವು ಶಾಖೆಯ ವತಿಯಿಂದ “ಸ್ವಸ್ಥತೆಗಾಗಿ ಸ್ವಚ್ಚತೆ ” ಆಂದೋಲನದ ಭಾಗವಾಗಿ ಹೈಸ್ಕೂಲ್ ಬಸ್ ಸ್ಟ್ಯಾಂಡ್ ನಿಂದ ಕಕ್ಕೆಪದವು ಜಂಕ್ಷನ್ ವರೆಗೆ ಹಾಗೂ ಬದ್ರಿಯ ಜುಮ್ಮಾ ಮಸ್ಜಿದ್ ಪರಿಸರವನ್ನು ಸ್ವಚ್ಚ ಗೊಳಿಸಲಾಯಿತು.
ಸ್ಥಳೀಯ ಖತೀಬ್ ಉಸ್ತಾದ್ ಅಬೂಬಕ್ಕರ್ ಸಅದಿ ಉಸ್ತಾದರ ದುವಾಃ ದೊಂದಿಗೆ ಚಾಲನೆ ನೀಡಲಾಯಿತು.ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಕಕ್ಕೆಪದವು ಶಾಖೆಯ
ಅಧ್ಯಕ್ಷರಾದ ಯಾಕುಬ್ ಮಿಸ್ಬಾಹಿ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಕಕ್ಕೆಪದವು ಎಸ್ ಎಸ್ ಎಫ್ ಮೂರುಗೋಳಿ ಸೆಕ್ಟರ್
ಬ್ಲಡ್ ಸೈಬೋ ಉಸ್ತುವಾರಿ ಶಿಹಾಬ್ SJK ಕಕ್ಕೆಪದವು ಪಾಲ್ಗೊಂಡಿದ್ದರು.

ಬದ್ರಿಯ ಜುಮ್ಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಸಮದ್ ಕರ್ಲ, ಸೆಕ್ಟರ್ ತುರ್ತು ಸೇವಾ ತಂಡದ ಸದಸ್ಯರಾದ ಬದ್ರುದ್ದೀನ್ MG, SYS ಕಕ್ಕೆಪದವು ಬ್ರಾಂಚ್ ಮಾಜಿ ಅಧ್ಯಕ್ಷರಾದ ಅಕ್ಬರ್ ಅಲಿ ಗುಡ್ಡೆಮನೆ, SYS ಸದಸ್ಯರಾದ ಖಾಸೀಂ JK, ಹಾರೀಸ್ KK, ಇಬ್ರಾಹಿಂ ಡ್ರೈವರ್ ಕಕ್ಕೆಪದವು
ಹಾಗೂ SYS .SSF. BJM ಕಾರ್ಯಕಾರಿ ಸದಸ್ಯರು ಹಾಗೂ ಸದಸ್ಯರು ಕೈ ಜೋಡಿಸಿದರು.






