ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಡಿವಿಷನ್ ಡೀನ್ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ರವರ ಅಧ್ಯಕ್ಷತೆಯಲ್ಲಿ Zoom ನಲ್ಲಿ ನಡೆಯಿತು.
ಜಿಲ್ಲಾ ನಾಯಕರುಗಳಿಗೆ ಯಶಸ್ವಿಯಾಗಿ ತರಭೇತಿ ನೀಡಿದ ರಾಜ್ಯ ಸಮಿತಿಯು ಅದರ ಮುಂದುವರಿದ ಭಾಗವಾಗಿ ಡಿವಿಷನ್ ನಾಯಕರಿಗೆ ಹಮ್ಮಿಕೊಂಡ ತರಭೇತಿ ಕಾರ್ಯಾಗಾರವಾಗಿದೆ. ಸೆಪ್ಟಂಬರ್ 6 ರಿಂದ ಆರಂಭವಾಗಿ ಸೆಪ್ಟಂಬರ್ 13 ರ ತನಕ ನಡೆಯುವ ಕಾರ್ಯಾಗಾರದಲ್ಲಿ ರಾಷ್ಟ್ರೀಯ , ಕೇರಳ ಹಾಗೂ ಕರ್ನಾಟಕ ರಾಜ್ಯ ನುರಿತ ತರಭೇತಿದಾರರು ತರಬೇತಿ ನೀಡಲಿದ್ದಾರೆ.
ಕತ್ತರ್ ಕೆ.ಸಿ.ಎಫ್ ಇಹ್ಸಾನ್ ಕಾರ್ಯದರ್ಶಿ ರಹೀಂ ಸಅದಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ತರಭೇತಿ ನೀಡಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಡೀನ್ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ ಹಾಗೂ ರಾಜ್ಯ ನಾಯಕರು ಉಪಸ್ಥಿತರಿದ್ದರು.