ಬುರೈದ ದಲ್ಲಿ ಆನಾರೋಗ್ಯ ನಿಮಿತ್ತ ಕೆಲಸವಿಲ್ಲದೆ ದಿನದೂಡಲು ಕಷ್ಟಪಡುತ್ತಿದ್ದ ವಿಟ್ಲ ಸಮೀಪದ ಯುವಕನೊಬ್ಬ ಪರಿಚಯಸ್ಥರ ಮುಖಾಂತರ ಕೆ.ಸಿ.ಎಫ್ ಅಲ್’ಗಸೀಂ ನೇತಾರರನ್ನು ಸಂಪರ್ಕಿಸಿ ತನ್ನ ದಾರುಣ ಸ್ಥಿತಿಯನ್ನು ತಿಳಿಸಿದಾಗ ತಕ್ಷಣ ಕಾಯ೯ ಪ್ರವೃತ್ತರಾದ ಕೆ.ಸಿ.ಎಫ್ ನೇತಾರರು ಯುವಕನನ್ನು ಬೇಟಿಯಾಗಿ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಸಿ ಆಹಾರ ಸಾಮಾಗ್ರಿಗಳನ್ನು ನೀಡಿ ಸಂತೈಸಿದರು.
ಒಂದೆರಡು ದಿನಗಳ ಬಳಿಕ ಕಫೀಲ್ ನೊಂದಿಗೆ ಮಾತಾಡಿ ಯುವಕನನ್ನು ಕರೆದು ಕೊಂಡು ಬಂದು 2 ತಿಂಗಳುಗಳ ಕಾಲ ಊಟ ಮತ್ತು ವಸತಿ ವ್ಯವಸ್ಥೆ ಮಾಡಿ 9-7-20 ರಂದು ಕೆ.ಸಿ.ಫ್ ಚಾರ್ಟರ್ಡ್ ವಿಮಾನದಲ್ಲಿ ಟಿಕೆಟ್ ಮತ್ತು ಕೊರೆಂಟೈನ್ ವೆಚ್ಚವನ್ನು ಭರಿಸಿ ಊರಿಗೆ ತಲುಪಿಸುವ ಮೂಲಕ ವಿಟ್ಲದ ಅನಿವಾಸಿ ಕನ್ನಡಿಗನ ಸಂಕಷ್ಟದಲ್ಲಿ ಸಾಂತ್ವನದ ಬೆಳಕಾಗುವ ಮೂಲಕ ಪ್ರಶಂಸೆಗೆ ಪಾತ್ರವಾದರು.
ಈ ಕಾರ್ಯಾಚರಣೆಯ ನೇತೃತ್ವವನ್ನು ಕೆ.ಸಿ.ಎಫ್ ಅಲ್ ಖಸೀಂ ಝೋನ್ ಸಾಂತ್ವನ ಇಲಾಖೆ ಕಾರ್ಯದರ್ಶಿ ರಝಾಕ್ ನೆಕ್ಕಿಲ್ ಹಾಗೂ ಕೆ.ಸಿ.ಎಫ್ ಇಶಾರ40 ಯೂನಿಟ್ ಉಪಾದ್ಯಕ್ಷ ಶಾಫಿ ಪೆರುವಾಯಿಯವರು ವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ