ಬುರೈದ ದಲ್ಲಿ ಆನಾರೋಗ್ಯ ನಿಮಿತ್ತ ಕೆಲಸವಿಲ್ಲದೆ ದಿನದೂಡಲು ಕಷ್ಟಪಡುತ್ತಿದ್ದ ವಿಟ್ಲ ಸಮೀಪದ ಯುವಕನೊಬ್ಬ ಪರಿಚಯಸ್ಥರ ಮುಖಾಂತರ ಕೆ.ಸಿ.ಎಫ್ ಅಲ್’ಗಸೀಂ ನೇತಾರರನ್ನು ಸಂಪರ್ಕಿಸಿ ತನ್ನ ದಾರುಣ ಸ್ಥಿತಿಯನ್ನು ತಿಳಿಸಿದಾಗ ತಕ್ಷಣ ಕಾಯ೯ ಪ್ರವೃತ್ತರಾದ ಕೆ.ಸಿ.ಎಫ್ ನೇತಾರರು ಯುವಕನನ್ನು ಬೇಟಿಯಾಗಿ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಸಿ ಆಹಾರ ಸಾಮಾಗ್ರಿಗಳನ್ನು ನೀಡಿ ಸಂತೈಸಿದರು.
ಒಂದೆರಡು ದಿನಗಳ ಬಳಿಕ ಕಫೀಲ್ ನೊಂದಿಗೆ ಮಾತಾಡಿ ಯುವಕನನ್ನು ಕರೆದು ಕೊಂಡು ಬಂದು 2 ತಿಂಗಳುಗಳ ಕಾಲ ಊಟ ಮತ್ತು ವಸತಿ ವ್ಯವಸ್ಥೆ ಮಾಡಿ 9-7-20 ರಂದು ಕೆ.ಸಿ.ಫ್ ಚಾರ್ಟರ್ಡ್ ವಿಮಾನದಲ್ಲಿ ಟಿಕೆಟ್ ಮತ್ತು ಕೊರೆಂಟೈನ್ ವೆಚ್ಚವನ್ನು ಭರಿಸಿ ಊರಿಗೆ ತಲುಪಿಸುವ ಮೂಲಕ ವಿಟ್ಲದ ಅನಿವಾಸಿ ಕನ್ನಡಿಗನ ಸಂಕಷ್ಟದಲ್ಲಿ ಸಾಂತ್ವನದ ಬೆಳಕಾಗುವ ಮೂಲಕ ಪ್ರಶಂಸೆಗೆ ಪಾತ್ರವಾದರು.
ಈ ಕಾರ್ಯಾಚರಣೆಯ ನೇತೃತ್ವವನ್ನು ಕೆ.ಸಿ.ಎಫ್ ಅಲ್ ಖಸೀಂ ಝೋನ್ ಸಾಂತ್ವನ ಇಲಾಖೆ ಕಾರ್ಯದರ್ಶಿ ರಝಾಕ್ ನೆಕ್ಕಿಲ್ ಹಾಗೂ ಕೆ.ಸಿ.ಎಫ್ ಇಶಾರ40 ಯೂನಿಟ್ ಉಪಾದ್ಯಕ್ಷ ಶಾಫಿ ಪೆರುವಾಯಿಯವರು ವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ