ಕೊಟ್ಟಮುಡಿ: ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ವತಿಯಿಂದ ಮಡಿಕೇರಿ ಕೋರಂಟೈನಿನಲ್ಲಿರುವರಿಗೆ ಆಹಾರ ಸಾಮಗ್ರಿಗಳ ವಿತರಣೆ ಬುಧವಾರ ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆಯಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಸುನ್ನಿ ಸಂಘ ಕುಟುಂಬಗಳ ನೇತಾರರೂ ಭಾಗವಹಿಸಿದ್ದರು, ಸಯ್ಯದ್ ಇಲ್ಲಾಸ್ ಸಖಾಫಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅದವಯಲ್ ಮುಹಮ್ಮದ್ ಹಾಜಿ ಉದ್ಘಾಟಿಸಿದರು.

ಪ್ರಸ್ತುತ ಕಾರ್ಯಕ್ರಮದ ಮುನ್ನಡಿ ಭಾಷಣವನ್ನು KSWA KSA ಕೋಡಿನೇಟರ್ ಹಫೀಳ್ ಸಅದಿ ಮಾತನಾಡಿ ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಇದುವರೆಗೆ ಕೊಡಗಿನಲ್ಲಿ ನಡೆಸಿದ್ದ ಸ್ವಾಂತನ ಕಾರ್ಯಾಚರಣೆಯನ್ನು ವಿವರಿಸಿದರು KSWA KSA ನೇತಾರರಾದ ಅಬ್ದುಲ್ ಖಾದರ್ ಎರುಮಾಡ್, ರಫೀಕ್ ನೆಲ್ಲಿ ಹುದಿಕೇರಿ, ಮತ್ತು KSWA ದ ಹಲವಾರು ಸದಸ್ಯರು ಭಾಗವಹಿಸಿದ್ದರು ಖಾಸಿಂ ಸಖಾಫಿ ಕೊಂಡಂಗೇರಿ ಸ್ವಾಗತಿಸಿ,ವಂದಿಸಿದರು.






