ಮಂಗಳೂರು: ಕೆಸಿಎಫ್ ಚಾರ್ಟೆಡ್ ವಿಮಾನ ಮೂಲಕ ಮಂಗಳೂರು ತಲುಪಿದ ಪ್ರಯಾಣಿಕರಲ್ಲಿ ಉಳ್ಳಾಲ ಸಮ್ಮರ್ ಸಾಂಡ್ ಬೀಚ್ ರೆಸರ್ಟ್ ನಲ್ಲಿ ಕಾರಂಟೈನ್ ಗೆ ಆಗಮಿಸಿದ ಅನಿವಾಸಿಗಳನ್ನು ಎಸ್ಸೆಸ್ಸೆಫ್ ಉಳ್ಳಾಲ ಹಾಗೂ ತೊಕ್ಕೊಟ್ಟು ಸೆಕ್ಟರ್ Q ಟೀಮ್, ಉಳ್ಳಾಲ ಡಿವಿಷನ್ ಹಾಗೂ ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕರ ನಿಯೋಗವು ಸ್ವಾಗತಿಸಿತು.


ಎಸ್ ವೈ ಎಸ್ ನಾಯಕರಾದ ಶಿಹಾಬುದ್ದೀನ್ ಸಖಾಫಿ, ಹನೀಫ್ ಹಾಜಿ, ಬಶೀರ್ ಸಖಾಫಿ, ಇಲ್ಯಾಸ್ ಕೈಕೊ, ರಿಯಾಝ್ ಆಲೇಕಲ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕಾರ್ಯದರ್ಶಿ ಜಾಫರ್ ಯು.ಎಸ್ ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಮದನಿ, ರಿಲ್ವಾನ್ ಸುಂದರಿಬಾಗ್, ಇಮ್ರಾನ್ ಕೋಡಿ ಮುಜಾಫರ್ ಆಜಾದ್ ನಗರ ಹಾಗೂ ಇನ್ನಿತರ ಸಂಘಟನಾ ನಾಯಕರು, ಕಾರ್ಯಕರ್ತರು ಹಾಗೂ ಮಾಜಿ ಕೌನ್ಸಿಲರ್ ಅಶ್ರಫ್ ಬಾವಾ ಕೋಡಿ, ಶೌಕತ್ ಆಜಾದ್ ನಗರ, ಕಾಂಗ್ರೆಸ್ ಮುಖಂಡರಾದ ರಫೀಕ್ ಮಿಲ್ಲತ್ ನಗರ ಹಾಜರಿದ್ದರು.






