janadhvani

Kannada Online News Paper

ಉತ್ತರ ಭಾರತದ ವ್ಯಕ್ತಿ ಸೌದಿಯಲ್ಲಿ ಮೃತ್ಯು- ಕೆಸಿಎಫ್ ನೆರವಿನಲ್ಲಿ ಅಂತ್ಯಕ್ರಿಯೆ

ಸೌದಿ ಅರೇಬಿಯಾ: ಖಮೀಸ್ ಮುಶೈತ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ರೋಜ್ ಮುಹಮ್ಮದ್ ಸುಲೇಮಾನ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವಾರಸುದಾರರಿಲ್ಲದೆ ಇವರ ಮಯ್ಯಿತನ್ನು ಆಸ್ಪತ್ರೆಯ ಮೋರ್ಚರಿಯಲ್ಲಿ ಇಡಲಾಗಿತ್ತು. ವಿಷಯ ತಿಳಿದ ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬನ್ನೂರು ಕೂಡಲೇ ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ಅಗತ್ಯವಿರುವ ದಾಖಲೆ ಪತ್ರಗಳನ್ನು ಸರಿಪಡಿಸಿ, ಮೃತದೇಹವನ್ನು ವಾರದೊಳಗಾಗಿ ದಫನಗೈಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ರೀತಿ ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ವತಿಯಿಂದ ಕೆಲಸವಿಲ್ಲದೆ ತೊಂದರೆಯಲ್ಲಿ ಸಿಲುಕಿರುವ ಅನಿವಾಸಿ ಮಿತ್ರರಿಗೆ ಆಹಾರದ ಕಿಟ್ ವಿತರಣೆ ಹಾಗೂ ಇನ್ನಿತರ ಸಾಂತ್ವನ ಕಾರ್ಯಾಚರಣೆಗಳು ನಡೆಸಿಕೊಂಡು ಅನಿವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್