janadhvani

Kannada Online News Paper

ನಾಳೆ ವಿಸ್ಡಮ್ ವರ್ಲ್ಡ್ ಇಸ್ಲಾಮಿಕ್ ಪ್ರಿ ಸ್ಕೂಲ್ ರಾಜ್ಯ ಮಟ್ಟದ ಆನ್ಲೈನ್ ಹಿಫ್ಝುಲ್ ಖುರ್ಆನ್ ಸ್ಪರ್ಧೆ

ಮಂಗಳೂರು: ರಾಜ್ಯದ ಪ್ರತಿಷ್ಠಿತ ಇಸ್ಲಾಮಿಕ್ ಪ್ರಿಸ್ಕೂಲ್ ಸಂಸ್ಥೆಯಾಗಿರುವ ವಿಸ್ಡಂ ವೇಲ್ಡ್
ವತಿಯಿಂದ ರಾಜ್ಯಾದ್ಯಂತ ವಿವಿಧ ಸೆಂಟರುಗಳಲ್ಲಿ ಆಯೋಜಿಸಲಾದ ಸೆಂಟರ್ ಮಟ್ಟದ ಆನ್ಲೈನ್ ಹಿಫುಝುಲ್ ಕುರ್ಆನ್ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪುಟಾಣಿ ಮಕ್ಕಳ ರಾಜ್ಯ ಮಟ್ಟದ ಆನ್ಲೈನ್ ಹಿಫುಝುಲ್ ಕುರ್ಆನ್ ಸ್ಪರ್ಧೆ ನಾಳೆ ( 11/06/2020 ಗುರುವಾರ)
ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಕುಕ್ಕಾಜೆ ಸೆಂಟರ್ ನಿಂದ ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ರವರ ಪುತ್ರ ಸಯ್ಯಿದ್ ಮುಹಮ್ಮದ್ ‌ಸಜ್ಜಾದ್, ಅಬ್ದುಲ್ ರಝಾಕ್ ಮುಸ್ಲಿಯಾರ್ ಪುತ್ರ ಝಾಹಿದ್,
ಮಂಚಿ ಇಬ್ರಾಹಿಂ ರವರ ಪುತ್ರಿ ರುಹೈಬ, ಮಂಚಿ ರಫೀಕ್ ಝುಹ್ರಿ ಪುತ್ರಿ ಅಫೀಫ ಹಾಗೂ ಅನ್ಸಾರ್ ಅಝ್ ಹರಿ ರವರ ಪುತ್ರ ಅನಸ್ ಅಬ್ದುಲ್ ರಹ್ಮಾನ್

ಜಾರಿಗೆ ಬೈಲ್, ನಾಳ ಸೆಂಟರ್ ನಿಂದ ಅಕ್ಬರ್ ಅಲಿ ಪುತ್ರಿ ಅಮ್ನಾ ಅಲ್ ಮರ್ಯಂ, ನಾಸಿರ್ ರವರ ಪುತ್ರಿ ನೂಹಾ ಫಾತಿಮಾ ಹಾಗೂ ಖಾಸಿಂ ಸಅದಿ ಪುತ್ರ ಮುಹಮ್ಮದ್ ಅಮೀನ್

ಫರೀದ್ ನಗರ,‌ಹರೇಕಳ ಸೆಂಟರ್ ನಿಂದ ಸಿದ್ದೀಕ್ ಸಖಾಫಿಯವರ ಪುತ್ರ ಮುಹಮ್ಮದ್ ಸಬೀಲ್ ನಝೀರ್ ರವರ ಪುತ್ರಿ ಶಿಬ್ಲಾ ಹಾಗೂ ಇಸ್ಮಾಯಿಲ್ ರವರ ರೆಹಾನ್

ಕೊಕ್ಕಡ, ಪಟ್ಟೂರು ಸೆಂಟರ್ ನಿಂದ ಶಾಹುಲ್ ಹಮೀದ್ ಪುತ್ರ ಸಾದಾತ್, ಎಂ.ಕೆ ಹನೀಫ್ ರವರ ಪುತ್ರ ಮುಹಮ್ಮದ್ ಜಾಹಿರ್
ಭಾಗವಹಿಸಲಿದ್ದಾರೆ.