ರಿಯಾದ್: ಸೌದಿ ಅರೇಬಿಯಾದಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಏರ್ಪಡಿಸಲಾದ ನಿರ್ಬಂಧಗಳನ್ನು ಸಡಿಲಿಸುವುದಾಗಿ ಗೃಹ ಸಚಿವಾಲಯ ಘೋಷಿಸಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಹಾಜರಾಗಲು ಇರುವ ನಿರ್ಬಂಧವನ್ನು ಸಚಿವಾಲಯ ತೆಗೆದುಹಾಕಿದೆ. ಗುರುವಾರದಿಂದ ಎಲ್ಲರೂ ಅತೀವ ಮುಂಜಾಗ್ರತೆಯಿಂದ ಕೆಲಸಕ್ಕೆ ಹಾಜರಾಗಬಹುದು. ದೇಶದ ಎಲ್ಲಾ ಸಣ್ಣ ಮತ್ತು ದೊಡ್ಡ ವಾಣಿಜ್ಯ ವ್ಯವಹಾರ ಕೇಂದ್ರಗಳಲ್ಲಿ ಕೆಲಸ ಆರಂಭಿಸಬಹುದಾಗಿದೆ.
ದೇಶೀಯ ವಿಮಾನಗಳ ಮೇಲಿನ ನಿರ್ಬಂಧವನ್ನೂ ರದ್ದುಪಡಿಸಲಾಗಿದೆ. ವೈಮಾನಿಕ ಸೇವೆಯನ್ನು ಸುರಕ್ಷತೆಯೊಂದಿಗೆ ಹಂತಹಂತವಾಗಿ ಆರಂಭಿಸಲಾಗುತ್ತದೆ. ದೇಶದ ಪ್ರಾಂತ್ಯಗಳ ನಡುವಿನ ಪ್ರಯಾಣ ತಡೆಯನ್ನು ಭಾಗಶಃ ಹಿಂತೆಗೆದುಕೊಳ್ಳಲಾಯಿತು. ಗುರುವಾರದಿಂದ ಶನಿವಾರದವರೆಗೆ(ಮೇ.28-30) ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಜನರು ಪ್ರಾಂತ್ಯಗಳ ನಡುವೆ ಮತ್ತು ನಗರಗಳ ನಡುವೆ ಪ್ರಯಾಣಿಸಬಹುದು.
ಎರಡನೇ ಹಂತದ ಸಡಿಲಿಕೆ ಮೇ 31 ಕ್ಕೆ ಆರಂಭ. ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಪ್ರಾಂತ್ಯಗಳ ನಡುವೆ ಪ್ರಯಾಣ ನಡೆಸಬಹುದು. ಆದರೆ ಮಕ್ಕಾಕಡೆಗೆ ಯಾತ್ರೆ ಮತ್ತು ಉಮ್ರಾ ಸ್ಥಗಿತ ಗೊಳಿಸಿರುವುದನ್ನು ಮುಂದುವರಿಸಲಾಗಿದೆ. ಜೂನ್ 21 ರಿಂದ ದೇಶ ಸಾಮಾನ್ಯ ಸ್ಥಿತಿಗೆ ಮರಳಲಿದೆ.ಅಂದಿನಿಂದ ಮಕ್ಕಾ ಹೊರತುಪಡಿಸಿ ದೇಶದ ಎಲ್ಲೆಡೆ ಪ್ರಯಾಣಿಸಬಹುದು. ಅಂತರರಾಷ್ಟ್ರೀಯ ವಿಮಾನಯಾನ ಪ್ರಾರಂಭವಾಗುವ ದಿನಾಂಕವನ್ನು ಘೋಷಿಸಲಾಗಿಲ್ಲ.
ಮಕ್ಕಾ ಹೊರತುಪಡಿಸಿ ದೇಶದ ಎಲ್ಲಾ ಮಸೀದಿಗಳಲ್ಲಿ ಮುಂದಿನ ಭಾನುವಾರದಿಂದ(ಮೇ.31) ಪ್ರಾರ್ಥನೆಗಳಿಗೆ ಅವಕಾಶ ನೀಡಲಾಗಿದೆ,ಆದರೆ ಸಚಿವಾಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ರೆಸ್ಟೋರೆಂಟ್ಗಳು ಮತ್ತು ಕೆಫೆಗಳಿಗೆ ಏರ್ಪಡಿಸಲಾಗಿದ್ದ ನಿಯಂತ್ರಣವನ್ನೂ ಸಡಿಲಿಸಲಾಗಿದೆ. ಸಚಿವಾಲಯದ ಅಧಿಸೂಚನೆ ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡಬಹುದು.
ಕ್ಷೌರಿಕನ ಅಂಗಡಿಗಳು, ಜಿಮ್, ಸಿನೆಮಾ, ವಿವಾಹಗಳು, ಮನರಂಜನೆ ಮತ್ತು ಇತರ ಕಾರ್ಯಕ್ರಮಗಳ ನಿಷೇಧ ಮುಂದುವರಿಯಲಿದೆ. ಐವತ್ತಕ್ಕಿಂತ ಹೆಚ್ಚಿನ ಜನರು ಸೇರುವ ಯಾವುದೇ ಕಾರ್ಯಕ್ರಮವನ್ನು ಅನುಮತಿಸಲಾಗುವುದಿಲ್ಲ.















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ