ಉಳ್ಳಾಲ: SSF ಕರ್ನಾಟಕ ರಾಜ್ಯ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇದರ ಸದಸ್ಯರಾದ ಮೌಲಾನ ಶಾಫಿ ಸಅದಿ ಉಸ್ತಾದರ ನಿರ್ದೇಶನದ ಮೇರೆಗೆ ಮಂಜನಾಡಿ ನೆತ್ತಿಲ ಪದವು ನಲ್ಲಿರುವ 115 ಅರ್ಹ ಕುಟುಂಬಗಳಿಗೆ ಜಾತಿ ಮತ ವ್ಯತ್ಯಾಸವಿಲ್ಲದೆ ದ.ಕ ಜಿಲ್ಲಾ ವೆಸ್ಟ್ ಝೋನ್ ವತಿಯಿಂದ ಈದ್ ಕಿಟ್ ವಿತರಣೆಯನ್ನು ಮಾಡಲಾಯಿತು.
ಕಿಟ್ ವಿತರಣೆಯ ಮುಂಚಿತವಾಗಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಙಳ್ ದುಆಗೈದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಝೋನ್ ನಾಯಕರು ಹಾಗೂ ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಉಸ್ತಾದರು ಉದ್ಘಾಟಿಸಿದರು. ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದ್ ಉಳ್ಳಾಲ ಸಂದೇಶ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ವೆಸ್ಟ್ ಝೋನ್ ನಾಯಕರಾದ ಹಕೀಂ ಪೂಮನ್ನು, ಉಳ್ಳಾಲ ಡಿವಿಷನ್ ನಾಯಕರು, ಬ್ಲಡ್ ಸೈಬೋ ಉಸ್ತುವಾರಿಗಳಾದ ಅಲ್ತಾಫ್ ಶಾಂತಿಭಾಗ್, ದೇರಳಕಟ್ಟೆ ಸೆಕ್ಟರ್ ನಾಯಕರಾದ ಆಶಿಕ್ ಕಲ್ಪಾದೆ,ರಫೀಕ್ ತಿಬ್ಲಪದವು, ಸಫ್ವಾನ್ ಬದ್ಯಾರ್,ಅನೀಸ್, ಶಿಹಾಬ್ ಉಳ್ಳಾಲ, ನಿಝಾಮ್ ಒಂಬತ್ತು ಕೆರೆ ಮುಂತಾದವರು ಉಪಸ್ಥಿತರಿದ್ದರು.
KCF, INC ಜನರಲ್ ಸೆಕ್ರಟರಿ ಖಮರುದ್ದೀನ್ ಗೂಡಿನ ಬಳಿ, ಆಸಿಫ್ ಹಾಜಿ ಗೂಡಿನ ಬಳಿ, ಸಮೀಉಲ್ಲಾ ಗೂಡಿನ ಬಳಿ ಹಾಗೂ ಇಲ್ಯಾಸ್ ಕೈಕೋ ಕಾರ್ಯಕ್ರಮದ ಯಶಸ್ವಿಗಾಗಿ ವಿಶೇಷವಾದ ಸಹಕಾರ ನೀಡಿದ್ದರು.















ಇನ್ನಷ್ಟು ಸುದ್ದಿಗಳು
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ