janadhvani

Kannada Online News Paper

SSF ದ.ಕ ಜಿಲ್ಲೆ ತರ್ತೀಲ್ -2020: ಉಳ್ಳಾಲ ಡಿವಿಷನ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಉಳ್ಳಾಲ: ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಹಮ್ಮಿಕೊಂಡ ತರ್ತೀಲ್-2020 ಕ್ಯಾಂಪಸ್ ವಿದ್ಯಾರ್ಥಿಗಳ ಖುರ್’ಅನ್ ಆನ್ಲೈನ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಿಪ್ಳ್ ಸ್ಪರ್ಧೆಯಲ್ಲಿ ದಅವಾ ಜೂನಿಯರ್ ವಿಭಾಗದಲ್ಲಿ ಕೆ ಎಂ ಸಈದ್ ಕಿನ್ಯ ಪ್ರಥಮ ಸ್ಥಾನ ಮತ್ತು ಕ್ಯಾಂಪಸ್ ಸೀನಿಯರ್ ವಿಭಾಗದಲ್ಲಿ ಮುಹಮ್ಮದ್ ರಿಫಾಯಿ ತಲಪಾಡಿ ಹಿಪ್ಳ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಕ್ವಿಝ್ ಸ್ಪರ್ಧೆಯಲ್ಲಿ ದಅವಾ ಜೂನಿಯರ್ ವಿಭಾಗದಲ್ಲಿ ಸ್ವಬಾಹ್ ಉಳ್ಳಾಲ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಅದೇರೀತಿ ದಅವಾ ಸೀನಿಯರ್ ಹಿಪ್ಳ್ ಸ್ಪರ್ಧೆಯಲ್ಲಿ ಹಾಫಿಳ್ ಸಖೀಪ್ ಉಳ್ಳಾಲ ದ್ವಿತೀಯ ಸ್ಥಾನ ಪಡದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಹಾಗೂ ವಿಜೇತರಿಗೆ ಅಭಿನಂದನೆಗಳು.

ಮೊಹಮ್ಮದ್ ಆಶಿಕ್
ಕ್ಯಾಂಪಸ್&ವಿಸ್ಡಂ ಕಾರ್ಯದರ್ಶಿ
(ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್)