ಕುವೈತ್ ಸಿಟಿ: ಭಾರತೀಯರನ್ನು ಸ್ವಂತ ಖರ್ಚಿನಲ್ಲಿ ವಾಪಸ್ ಕಳುಹಿಸುವುದಾಗಿ ಕುವೈತ್ ಹೇಳಿದೆ. ಸಿಲುಕಿಕೊಂಡವರು, ಸಾರ್ವಜನಿಕ ಕ್ಷಮಾಪಣೆಯ ಲಾಭ ಪಡಕೊಂಡವರು ಮತ್ತು ಕಾರ್ಮಿಕರನ್ನು ಈ ಮೂಲಕ ತಲುಪಿಸಲಾಗುವುದು. ಭಾರತದಲ್ಲಿನ ಕುವೈತ್ ರಾಯಭಾರಿ ಜಾಸಿಮ್ ಅಲ್-ನಜೀಮ್ ಈ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದಾರೆ.
ಕುವೈತ್ ರಾಯಭಾರಿ ಜಾಸಿಮ್ ಅಲ್-ನಜೀಮ್ ಅವರು ತಮ್ಮ ಪತ್ರದಲ್ಲಿ, ಭಾರತ ಸರಕಾರವು ಕೋವಿಡ್ ಹಿನ್ನೆಲೆಯಲ್ಲಿ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಭಾರತೀಯರನ್ನು ಉಚಿತವಾಗಿ ಹಿಂದಿರುಗಿಸಲಾಗುವುದು ಎಂದಿದ್ದಾರೆ. ಭಾರತದಲ್ಲಿ ಸಿಲುಕಿಕೊಂಡಿದ್ದ ಕುವೈತ್ ಪ್ರಜೆಗಳನ್ನು ಹಲವು ದಿನಗಳ ಹಿಂದೆ ಕುವೈತ್ ಏರ್ವೇಸ್ ಮೂಲಕ ವಾಪಸ್ ಕಳುಹಿಸಲಾಗಿತ್ತು. ಜೊತೆಗೆ 15 ವೈದ್ಯಕೀಯ ತಂಡ ಮತ್ತು ವೈದ್ಯಕೀಯ ಉಪಕರಣಗಳನ್ನು ರವಾನಿಸಲಾಗಿದ್ದವು.
ಭಾರತೀಯರನ್ನು ವಾಪಸ್ ಕಳುಹಿಸಲಾಗುವ ಬಗ್ಗೆ ಯುಎಇ ಕೂಡ ಈ ಹಿಂದೆ ಘೋಷಿಸಿತ್ತು. ಆದರೆ ವಲಸಿಗರನ್ನು ಎರಡು ಹಂತಗಳಲ್ಲಿ ಕರೆತರುವ ಬಗ್ಗೆ ಕೇಂದ್ರ ಕ್ರಮವಹಿಸಿದೆ. ಕೊಲ್ಲಿ ಸೇರಿದಂತೆ 24 ದೇಶಗಳಲ್ಲಿ ಸಿಕ್ಕಿಹಾಕಿಕೊಂಡವರನ್ನು ಮೊದಲು ಕರೆತರಲಾಗುವುದು. ಈ ಉದ್ದೇಶಕ್ಕಾಗಿ ವಿಮಾನ ಮತ್ತು ಯುದ್ಧನೌಕೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ವರದಿಯಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು