ದೋಹಾ: ಕೋವಿಡ್ ಸಮೂಹಿಕ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಖತರ್ ಹೊಸ ಆ್ಯಪ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಮೊಬೈಲ್ ಅಪ್ಲಿಕೇಶನ್ಗೆ ‘ಇಹ್ತಿರಾಝ್’ ಎಂದು ಹೆಸರಿಸಲಾಗಿದೆ. ಅಪ್ಲಿಕೇಶನ್ ಸ್ಥಾಪಿಸುವ ಎಲ್ಲರ ಸಂಪರ್ಕ ಪಟ್ಟಿಯಲ್ಲಿರುವವರನ್ನು ಡೇಟಾಬೇಸ್ ಮೂಲಕ ಸಂಪರ್ಕಿಸುವ ಮೂಲಕ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.

ಆ್ಯಪ್ ಸಕ್ರಿಯಗೊಳಿಸಿದ ನಂತರ, ನಾಲ್ಕು ಬಣ್ಣಗಳ ನಿಶಾನೆಯನ್ನು ಪ್ರದರ್ಶಿಸುತ್ತದೆ. 1.ಹಸಿರು ಮೊಬೈಲ್ ಫೋನ್ ಬಳಸುವ ವ್ಯಕ್ತಿ ಆರೋಗ್ಯವಂತ ಎಂದು ತಿಳಿಯಬಹುದು. 2.ಗ್ರೇ (ಬೂದು) ಬಣ್ಣವು ಕೋವಿಡ್ ಕಾಯಿಲೆ ಇರುವವರೊಂದಿಗೆ ಸಂಪರ್ಕದಲ್ಲಿರಬಹುದು ಎಂದು ಸೂಚಿಸುತ್ತದೆ. 3.ಹಳದಿ ಬಣ್ಣದ್ದಾಗಿದ್ದರೆ ನೀವು ಈಗಾಗಲೇ ಸಂಪರ್ಕತಡೆ(ಕಾರಂಟೈನ್) ಯಲ್ಲಿ ಇದ್ದವರು ಎಂಬ ಮಾಹಿತಿಯನ್ನು ನೀಡುತ್ತದೆ.3. ಅಪ್ಲಿಕೇಶನ್ನಲ್ಲಿ ಕೆಂಪು ಬಣ್ಣ ಪ್ರಕಾಶಮಾನವಾಗಿದ್ದರೆ ನೀವು ಕೋವಿಡ್ ಸೋಂಕಿಗೆ ಒಳಗಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.
ವ್ಯಕ್ತಿಯ ಅಪ್ಲಿಕೇಶನ್ ಕೆಂಪು ಬಣ್ಣಕ್ಕೆ ತಿರುಗಿದಾಗ, ಅವರ ಫೋನ್ನ ಸಂಪರ್ಕ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ನಿಮ್ಮ ಅನಾರೋಗ್ಯದ ಕುರಿತು ಅಧಿಸೂಚನೆಯನ್ನು ಪಡೆಯುತ್ತಾರೆ. ರೋಗನಿರ್ಣಯ ಕೇಂದ್ರಗಳಲ್ಲಿ ಅವರು ವಿಶೇಷ ಚಿಕಿತ್ಸೆಗೆ ಪರಿಗಣನೆಯನ್ನೂ ಪಡೆಯಲಿದ್ದಾರೆ. ಹೆಚ್ಚು ಜನರು ಈ ಆ್ಯಪ್ ಅನ್ನು ಬಳಸತೊಡಗಿದಾದ, ಸಮೂಹದಲ್ಲಿ ಯಾರು ಯಾರು ಸಂಪರ್ಕತಡೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಸುಲಭವಾಗಲಿದೆ.
ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ವಕ್ತಾರ ಮತ್ತು ವಿದೇಶಾಂಗ ಸಚಿವ ಲುಲ್ವಾ ಅಲ್-ಖಾತಿರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೊಸ ಆ್ಯಪ್ ಬಿಡುಗಡೆ ಮಾಡುವ ಬಗ್ಗೆ ಘೋಷಿಸಿದರು.
ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದ್ದು,ದೇಶಾದ್ಯಂತ ಎಲ್ಲರೂ ತಮ್ಮ ಫೋನ್ಗಳಲ್ಲಿ ಈ ಆ್ಯಪ್ ಅನ್ನು ಸ್ಥಾಪಿಸಬೇಕೆಂದು ಲುಲ್ವಾ ಅಲ್-ಖತೀರ್ ಆಗ್ರಹಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು