ದುಬೈ: ಕೊಲ್ಲಿಯ ಪ್ರಮುಖ ರಾಷ್ಟ್ರವಾದ ಸುಲ್ತಾನೇಟ್ ಓಫ್ ಒಮಾನ್ ಇದರ ದೊರೆ ಖಾಬೂಸ್ ಬಿನ್ ಸಈದ್ ಅವರ ವಿಯೋಗದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತಾರಾಷ್ಟ್ರೀಯ ಸಮಿತಿ (KCF, INC) ಸಂತಾಪ ವ್ಯಕ್ತಪಡಿಸಿದೆ.
ಐದು ದಶಕಗಳಷ್ಟು ಕಾಲ ಒಮಾನ್ ಆಳಿದ ಸುಲ್ತಾನ್ ಭಾರತೀಯರಿಗೆ ಆಪ್ತರಾಗಿದ್ದು, ಕನ್ನಡಿಗರ ಸಹಿತ ಲಕ್ಷಾಂತರ ಭಾರತೀಯರು ಒಮಾನಿನಲ್ಲಿ ಉದ್ಯೋಗದಲ್ಲಿದ್ದು, ಆಧುನಿಕ ಒಮಾನ್ ನಿರ್ಮಾಣದಲ್ಲಿ ಅವರ ಸೇವೆಯನ್ನು ಖಾಬೂಸ್ ರವರು ಯಾವಾಗಲೂ ಬಹು ಕೃತಜ್ಞತೆಯೊಂದಿಗೆ ಸ್ಮರಿಸುತ್ತಿದ್ದರು.
ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಂದ ಉದ್ಯೋಗ ಅರಸಿ ಬಂದವರಿಗೆ ಜೀವನೋಪಾಯವನ್ನು ನೀಡಲು ತನ್ನ ರಾಷ್ಟ್ರದ ಜನತೆಯನ್ನು ಸಜ್ಜುಗೊಳಿಸಿ, ರಾಷ್ಟ್ರದ ಕ್ಯೆಗಾರಿಕೆ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಅತೀ ಹೆಚ್ಚಿನ ಕಾಳಜಿ ವಹಿಸಿ ಪ್ರಪಂಚದ ಮುಂಚೂಣಿ ರಾಷ್ಟ್ರವಾಗಲು ಪ್ರಯತ್ನಿಸಿದ ಅಪ್ರತಿಮ ನಾಯಕ ಸುಲ್ತಾನ್ ಖಾಬೂಸ್ ರವರ ಅಂತ್ಯವು ಒಮಾನಿಗೆ ಮಾತ್ರವಲ್ಲ ಎಲ್ಲಾ ಮನುಷ್ಯ ಸ್ನೇಹಿಗಳಿಗೆ ದುಃಖ ತಂದಿರಿಸಿದೆ ಎಂದು KCF ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿತು.
ಅವರ ಆತ್ಮಶಾಂತಿಯನ್ನು ಆಗ್ರಹಿಸಿ ದುಆ ಕಾರ್ಯಕ್ರಮ ಸಂಘಟಿಸಲು KCF ತನ್ನೆಲ್ಲ ಘಟಕಗಳಿಗೆ ಸೂಚಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ