janadhvani

Kannada Online News Paper

.ಉಚ್ಚಿಲ ದಾರುಲ್ ಅಮಾನ್ ವಿದ್ಯಾರ್ಥಿಗಳಿಂದ ರಿಫಾಯಿ ಅನುಸ್ಮರಣೆ ಪ್ರಯುಕ್ತ ರಸ್ತೆ ದುರಸ್ತಿ

ದಾರುಲ್ ಅಮಾನ್ ದಅವಾ ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.ದಾರುಲ್ ಅಮಾನ್ ಸಂಸ್ಥೆಯಿಂದ ಒಂದುವರೆ ಕಿಲೋಮೀಟರ್ ದೂರವಿರುವ ಪೆಜತಕಟ್ಟೆ ವರೆಗಿನ ರಸ್ತೆ ಹದಗೆಟ್ಟಿದ್ದು ವಾಹನ ಚಾಲಕರಿಗೆ ತುಂಬಾ ತೊಂದರೆ ಆಗುತ್ತಿತ್ತು.

ಸಂಸ್ಥೆಯಲ್ಲಿ ಪ್ರತಿ ತಿಂಗಳ ಪ್ರಥಮ ಶುಕ್ರವಾರ ಸ್ವಲಾತ್ ಕಾರ್ಯಕ್ರಮ ನಡೆಯುತ್ತಿದ್ದು ಇದರಿಂದ ವಿದೂರದಿಂದ ಆಗಮಿಸುವ ಪ್ರಯಾಣಿಕರು ತೊಂದರೆಗೊಳ ಗಾಗುತ್ತಿದ್ದಾರೆ. ಇದನ್ನು ಮನಗಂಡ ದಾರುಲ್ ಅಮಾನ್ ಸಂಸ್ಥೆಯು ಅಹ್ಮದುಲ್ ಕಬೀರ್ ರಿಫಾಯಿ(ರ) ಅನುಸ್ಮರಣೆ ಅಂಗವಾಗಿ ವಿದ್ಯಾರ್ಥಿಗಳ ಸಹಕಾರದಿಂದ ಹೊಂಡ ಬಿದ್ದ ರಸ್ತೆಗೆ ಮಣ್ಣು ತುಂಬಿಸಿ ಬಹಳ ಅಚ್ಚುಕಟ್ಟಾಗಿ ಈ ಕಾರ್ಯವನ್ನು ನಿರ್ವಹಿಸಿದೆ. ಅಮಾನ್ ದಅವಾ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ನಾಸಿರ್ ಮುಈನಿ ಹಾಗೂ ಮೇನೆಜರಾದ ಆಶಿಕ್ ಮುಈನಿಯವರ ನಿರ್ದೇಶನದ ಮೇರೆಗೆ ಈ ಕೆಲಸ ಪೂರ್ಣಗೊಂಡಿತು.

24 ವಿದ್ಯಾರ್ಥಿಗಳಿಂದ ನಾಲ್ಕು ತಂಡಗಳಾಗಿ ವಿಭಾಗಿಸಿ ಮುಷರ್ರಫ್ ಹಿರೆ ಬಂಡಾಡಿ ಆಶಿಕ್ ಬೋಗಡಿ ಶಾಹಿದ್ ಮಂಚಿ ಸಂಶುದ್ದೀನ್ ಕುಪ್ಪೆಟ್ಟಿ ನಾಯಕತ್ವದಲ್ಲಿ ಕಾರ್ಯ ಯಶಸ್ವಿಯಾಗಿ ನಡೆಯಿತು.