ಮಂಗಳೂರು : NRC, CAA ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟಿಸಲು ಅನುಮತಿ ನೀಡದಿದ್ದಾಗ ಮುಸ್ಲಿಂ ಸೆಂಟ್ರಲ್ ಕಮಿಟಿಯು ನಿರಂತರವಾಗಿ ಪಟ್ಟು ಹಿಡಿದಿದ್ದರೂ ಅನುಮತಿಯನ್ನು ನೀಡಲು ಹಿಂದೇಟು ಹಾಕಲಾಗಿತ್ತು.
ಕೊನೆಗೆ ಇಲಾಖೆಯ ಅನುಮತಿ ನಿರಾಕರಣೆಯ ಕಾರಣದಿಂದ ಸೆಂಟ್ರಲ್ ಕಮಿಟಿಯು ಅಡ್ಯಾರ್ ಕಣ್ಣೂರಿನಲ್ಲಿ ಪ್ರತಿಭಟನೆಯನ್ನು ಕೈಗೊಂಡ ನಿರ್ಧಾರ ಪ್ರಕಟಿಸಿದಾಗ ಜಿಲ್ಲೆಯ ಬಹುಪಾಲು ಜನರು ಸೆಂಟ್ರಲ್ ಕಮಿಟಿಯ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು.
ವಿರೋಧಿಗಳಿಗೆ ಬೇಕಾದದ್ದೂ ಕೂಡ ಅದುವೇ ಆಗಿತ್ತು. ಆದರೆ ಇಲ್ಲಿನ ಪ್ರಜ್ಞಾವಂತ ಮುಸ್ಲಿಂ ಸಮುದಾಯವು ಜಿಲ್ಲೆಯಲ್ಲಿ ನಡೆಯುತ್ತಿರುವ ಷಡ್ಯಂತ್ರಗಳನ್ನು ಅರ್ಥೈಸಿಕೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಪಣತೊಟ್ಟಾಗ ಕೆಲವು ಕಾಣದ ಕೈಗಳು, ಕೆಲ ಪೋಲೀಸ್ ಅಧಿಕಾರಿಗಳ ಜೊತೆ ಸೇರಿ ಮುಸ್ಲಿಮರ ಒಗ್ಗಟ್ಟನ್ನು ಹೇಗಾದರೂ ಮಾಡಿ ಇಲ್ಲವಾಗಿಸಬೇಕೆಂದುಕೊಂಡು ಒಂದು ಸ್ಕ್ರೀನ್ ಶಾಟ್ ನ ಹೆಸರಿನಲ್ಲಿ ಅಮಾಯಕ ಮದ್ರಸಾ ಅಧ್ಯಾಪಕರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಪ್ರತಿಭಟನೆಯನ್ನು ಪರಾಜಯಗೊಳಿಸುವ ಹುನ್ನಾರದಲ್ಲಿ ತೊಡಗಿದ್ದಾರೆ.
ಒಬ್ಬ ಗೌರವಯುತ ಸ್ಥಾನದಲ್ಲಿರುವ ಖಾಝಿಗಳು ಇಂತಹ ಕ್ಷುಲ್ಲಕ ವಿಷಯಗಳನ್ನು ಮಾತುಕತೆಯ ಮೂಲಕ ಬಗೆಹರಿಸದೆ ಕಾಣದ ಕೈಗಳ ಷಡ್ಯಂತ್ರಗಳಿಗೆ ಒಬ್ಬ ಅಮಾಯಕ ಮದ್ರಸಾ ಅಧ್ಯಾಪಕರನ್ನು ಬಲಿಪಶುವನ್ನಾಗಿ ಮಾಡಿಸಿದ್ದು ಖಂಡನೀಯವೆಂದು ಸುನ್ನೀ ಸಾಹಿತ್ಯ ಮಂಡಳಿ ಕರ್ನಾಟಕ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ