janadhvani

Kannada Online News Paper

ಪೌರತ್ವ ತಿದ್ದುಪಡಿ ಕಾಯ್ದೆ : ಸಿರಾಜುಲ್ ಫಲಾಹ್ ಅಸೋಸಿಯೇಷನ್ ತೀವ್ರ ವಿರೋಧ

ಮಂಗಳೂರು: ಉಂದು ವಿಭಾಗವನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಸರಕಾರ ಜಾರಿಗೆ ತಂದಿರುವ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ” ಭಾರತದ ಪರಮೋಚ್ಚ ಸಂವಿಧಾನಕ್ಕೆ ಅತಿದೊಡ್ಡ ಸವಾಲಾಗಿದೆ ಎಂದು ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಕೆ.ಎಂ.ಖಾಸಿಂ ಮದನಿ ಕರಾಯ ಅವರ ಪೂರ್ವ ವಿದ್ಯಾರ್ಥಿ ಸಂಘಟನೆ “ಸಿರಾಜುಲ್ ಫಲಾಹ್ ಅಸೋಸಿಯೇಷನ್ ಅಭಿಪ್ರಾಯ ಪಟ್ಟಿದೆ.

ಭಾರತ ಯಾವುದೇ ಒಂದು ಧರ್ಮ, ಜಾತಿಯ ಆಧಾರದಲ್ಲಿ ತಾರತಮ್ಯ ಮಾಡುವ ದೇಶವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಸಿಕ್ಕಿದಾಗ ಭಾರತದ ಸರ್ವ ಜನ ವಿಭಾಗದವರನ್ನು ಒಂದೇ ದೃಷ್ಟಿಕೋನದಿಂದ ನೋಡಬೇಕಾದ ಕೇಂದ್ರ ಸರಕಾರ ಕೇವಲ ಮುಸ್ಲಿಂ ಸಮುದಾಯವನ್ನು ಪೌರತ್ವ ಎಂಬ ಅಸ್ತ್ರವನ್ನು ಪ್ರಯೋಗಿಸಿ ಭಾರತ ದೇಶಕ್ಕೆ ಕೆಂಪುಕೋಟೆ, ತಾಜ್ ಮಹಲ್ ನಂಥಾ ಜಗತ್ತು ಬೆರಗು ಹುಟ್ಟಿಸುವ ಕೊಡುಗೆ ಗಳನ್ನು ನೀಡಿದ ದೇಶದ ಶಾಂತಿಪ್ರಿಯ ಮುಸ್ಲಿಂ ಸಮುದಾಯವನ್ನು ಪರಕೀಯರಾಗಿ ಕಾಣುವ ಷಡ್ಯಂತ್ರ ಖಂಡನೀಯ.

ಪ್ರಸ್ತುತ ಕರಾಳ ಕಾನೂನನ್ನು ಕೇಂದ್ರ ಸರಕಾರ ಕೂಡಲೇ ಕೈ ಬಿಡಬೇಕು.
ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಸರ್ವರೂ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯಿದೆ ” ವಿರುದ್ಧ ಹೋರಾಟ ಮಾಡಿ ಭವ್ಯ ಭಾರತದ ಶಾಂತಿ, ಸೌಹಾರ್ದತೆ,ಏಕತೆಯ ಪರಂಪರೆಯನ್ನು ಉಳಿಸಬೇಕೆಂದು ಅಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ, ಜಿ.ಎಂ.ಇಬ್ರಾಹಿಂ ಫುರ್ಖಾನಿ, ಅಬೂಸ್ವಾಲಿಹ್ ಮದನಿ ಆಲಡ್ಕ, ಜಿ. ಎಂ. ಕಾಮಿಲ್ ಸಖಾಫಿ, ಪಿ.ಎಸ್.ಇಬ್ರಾಹಿಂ ಮದನಿ, ತೋಕೆ ಸಖಾಫಿ,ಕೆ.ಎಂ.ಹೈದರ್ ಮದನಿ ಮೊದಲಾದವರು ಕರೆ ನೀಡಿದ್ದಾರೆ.