ಉಜಿರೆ: ಸುನ್ನಿ ಯುವ ಜನ ಸಂಘ (SYS) ಉಜಿರೆ,ಅತ್ತಾಜೆ ಹಾಗೂ ಕಕ್ಯಾನ ಬ್ರಾಂಚ್ ವತಿಯಿಂದ ವಿಶೇಷ ತರಗತಿಯು ದಿನಾಂಕ 14.12.2019 ನೇ ಶನಿವಾರ ಮಗ್ರಿಬ್ ನಮಾಝಿನ ಬಳಿಕ ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದರಸ ಹಳೆಪೇಟೆ ಉಜಿರೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು SYS ಉಜಿರೆ ಬ್ರಾಂಚ್ ಅಧ್ಯಕ್ಷರಾದ ಹೈದರ್ ಮದನಿ ವಹಿಸಿದ್ದರು.
MJM ಹಳೆಪೇಟೆ ಉಜಿರೆಯ ಖತೀಬರಾದ ಬಹು| ಅಲ್ಹಾಜ್ ಅಬ್ಬಾಸ್ ಮದನಿ ಉದ್ಘಾಟಿಸಿದರು. ಬೆಳ್ತಂಗಡಿ ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಬಹು.ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ದುಅ ಹಾಗು ಆಶಂಸ ಭಾಷಣ ನಡೆಸಿದರು.
SYS ರಾಜ್ಯಧ್ಯಕ್ಷರಾದ ಬಹು G.ಮುಹಮ್ಮದ್ ಕಾಮಿಲ್ ಸಖಾಫಿ ತರಗತಿಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ KMJ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ S.M ಕೋಯ ತಂಙಳ್ ಉಜಿರೆ,SYS ಉಜಿರೆ ಸೆಂಟರ್ ಅಧ್ಯಕ್ಷರಾದ ಅಬ್ದುರ್ರಶೀದ್ ಬಲಿಪಾಯ ನೆರಿಯ, ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್,ಉಪಾಧ್ಯಕ್ಷರಾದ ಮುಹಿಯುದ್ದೀನ್ ಉಜಿರೆ, ಇಬ್ರಾಹಿಂ ವಾಫಿರ್ MJM ಹಳೆಪೇಟೆ ಉಜಿರೆಯ ಕೋಶಾಧಿಕಾರಿ,SYS ಅತ್ತಾಜೆ ಬ್ರಾಂಚ್ನ ಅಧ್ಯಕ್ಷರಾದ ಆಸಿಫ್, SYS ಕಕ್ಯಾನ ಬ್ರಾಂಚ್ನ ಅಧ್ಯಕ್ಷರಾದ ಯಾಕೂಬ್, ಸಿದ್ದೀಕ್ ವಾಫಿರ್, (ಅಧ್ಯಕ್ಷರು,ಅಲ್- ಅಮೀನ್ ಯಂಗ್ಮೆನ್ಸ್ ) ಫಝಲ್ ರಹ್ಮಾನ್ ( ಕೋಶಾಧಿಕಾರಿ, ಅಲ್- ಅಮೀನ್ ಯಂಗ್ಮೆನ್ಸ್ ) ಹಾಗೂ SYS ಸದಸ್ಯರುಗಳು ಮತ್ತು SSF ಕಾರ್ಯಕರ್ತರು ಉಪಸ್ಥಿತರಿದ್ದರು.
SYS ಉಜಿರೆ ಬ್ರಾಂಚ್
ಪ್ರ.ಕಾರ್ಯದರ್ಶಿ ಹಾರಿಸ್ AtoZ ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು. ಸ್ವಲಾತ್ನೊಂದಿಗೆ ಕೊನೆಗೊಳಿಸಲಾಯಿತು.
ವರದಿ:ಎಂ.ಎಂ.ಉಜಿರೆ






