janadhvani

Kannada Online News Paper

ಅಬುಧಾಬಿ: ತುರ್ತು ಪರಿಸ್ಥಿತಿಯಲ್ಲಿ ವಿಮೆ ಪರಿಗಣಿಸದೆ ಚಿಕಿತ್ಸೆ ನೀಡಬೇಕು

ಅಬುಧಾಬಿ: ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತಲುಪುವ ರೋಗಿಗಳಿಗೆ ವಿಮೆ ಪರಿಗಣಿಸದೆ ಚಿಕಿತ್ಸೆ ನೀಡಬೇಕು ಎಂದು ಅಬುಧಾಬಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸಬಾರದು ಅಥವಾ ಹಣದ ಹೆಸರಿನಲ್ಲಿ ವಿಳಂಬ ಮಾಡಬಾರದು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.

ಅಬುಧಾಬಿ ಸರ್ಕಾರ ಹೊರಡಿಸಿದ ಈ ನಿರ್ದೇಶನವನ್ನು ಇಡೀ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಲ್ಲಿ ತಕ್ಷಣ ಹಣವನ್ನು ಕೇಳಬಾರದು ಅಥವಾ ವಿಮೆಯ ಹೆಸರಿನಲ್ಲಿ ಚಿಕಿತ್ಸೆ ವಿಳಂಬಗೊಳಿಸಬಾರದು. ಅಬುಧಾಬಿಯ ಸಂಪೂರ್ಣ ಆರೋಗ್ಯ ಕೇಂದ್ರಗಳು ವಿಮಾ ರಕ್ಷಣೆಯನ್ನು ಲೆಕ್ಕಿಸದೆ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ದಾಖಲಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಲ್ ಐನ್‌ನ ಎರಡು ಆಸ್ಪತ್ರೆಗಳು ವಿಮೆ ಅವಧಿ ಮುಗಿದ ನೆಪದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ ಕಾರಣ ಸಾವನ್ನಪ್ಪಿದ ಎಂಟು ವರ್ಷದ ಮಗನ ತಂದೆ ನೀಡಿದ ದೂರಿನ ತನಿಖೆಯ ಮಧ್ಯೆ ಸರ್ಕಾರದ ಪ್ರಸ್ತಾಪ ಬಂದಿದೆ. ಆದರೆ, ಈ ಪ್ರಸ್ತಾಪವು ಅಬುಧಾಬಿಯಲ್ಲಿ ಹಲವು ವರ್ಷಗಳಿಂದ ಜಾರಿ ಇದ್ದರೂ, ಇದೀಗ ಸರಕಾರ ಅದನ್ನು ಬಿಗಿಗೊಳಿಸುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.