ದಮಾಮ್: ಕಣ್ಣೂರಿನಿಂದ ದಮ್ಮಾಮ್ಗೆ ಸರ್ವೀಸ್ ನಡೆಸಲು ಗೋ ಏರ್ಗೆ ಅನುಮತಿ ಲಭಿಸಿದೆ. ನೇರ ಸೇವೆಯು ಡಿಸೆಂಬರ್ 19 ರಿಂದ ಪ್ರಾರಂಭವಾಗಲಿದೆ ಎಂದು ಗೋ ಏರ್ ಇಂಟರ್ ನ್ಯಾಷನಲ್ ಆಪರೇಶನ್ಸ್ ಹಿರಿಯ ಜನರಲ್ ಮ್ಯಾನೇಜರ್ ಜಲೀಲ್ ಖಾಲಿದ್ ತಿಳಿಸಿದ್ದಾರೆ.
ಗೋ ಏರ್ ವಿಮಾನಗಳು ಕೆಲವು ಗಲ್ಫ್ ಕ್ಷೇತ್ರಗಳಿಗೆ ಹಾರಾಟ ನಡೆಸುತ್ತಿವೆ, ಆದರೆ ಇದೇ ಮೊದಲ ಬಾರಿಗೆ ದಮ್ಮಾಮ್ಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆರಂಭದಲ್ಲಿ, ವಾರಕ್ಕೆ ನಾಲ್ಕು ಸೇವೆಗಳು ಇರಲಿವೆ. ಬೆಳಿಗ್ಗೆ 9.55 ಕ್ಕೆ ದಮ್ಮಾಂನಿಂದ ಹೊರಟು ಸಂಜೆ 5 ಗಂಟೆಗೆ ಕಣ್ಣೂರು ತಲುಪಲಿದೆ. ಕಣ್ಣೂರಿನಿಂದ ಬೆಳಿಗ್ಗೆ 6.55 ಕ್ಕೆ ಹೊರಟು ಬೆಳಿಗ್ಗೆ 8.55 ಕ್ಕೆ ದಮ್ಮಾಂ ತಲುಪಲಿದೆ. ಹೊಸ ಹಾರಾಟದ ಸಮಯವನ್ನು ವ್ಯವಹಾರದ ದಿನಗಳನ್ನು ಉಳಿಸುವ ಸಾಧ್ಯತೆಗೆ ಅನುಗುಣವಾಗಿ ಹೊಂದಿಸಲಾಗಿದೆ.
ವಿಮಾನವು ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರ ದಮ್ಮಾಂನಿಂದ ಹೊರಡಲಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಋತುವಿನ ಲಾಭವನ್ನು ಪಡೆದುಕೊಳ್ಳುವ ವಿಮಾನ ಯಾನ ಕಂಪೆನಿಗಳ ಮಧ್ಯೆ ಪ್ರಯಾಣಿಕರಿಗೆ ಗೋ ಏರ್ ಒಂದು ಹಾದಿಗೆ 499 ರಿಯಾಲ್ ಮತ್ತು ಎರಡೂ ಕಡೆಗೆ 999 ರಿಯಾಲ್ ಮಾತ್ರ ದರ ನಿಗದಿ ಪಡಿಸಿದೆ. ಇದೇ ದರದಲ್ಲಿ 30 ಕೆಜಿ ಲಗೇಜ್ ಮತ್ತು 7 ಕೆಜಿ ಕೈ ಲಗ್ಗೇಜನ್ನು ಸಾಗಿಸಬಹುದು. ಇದು ತೆರಿಗೆಗಳು, ಟ್ಯಾಕ್ಸ್ ಗಳನ್ನು ಒಳಗೊಂಡಿವೆ ಎಂದು ಸಲೀಮ್ ಖಾಲಿದ್ ಹೇಳಿದರು.
ಕಣ್ಣೂರು ವಿಮಾನ ನಿಲ್ದಾಣವನ್ನು ಅವಲಂಬಿಸಿರುವ ಪ್ರಾಂತ್ಯದ ಪ್ರಯಾಣಿಕರು ನಿರಾಶೆಗೊಂಡಿದ್ದರು.
ಕಾಸರಗೋಡು, ಕೋಝಿಕೋಡ್, ವಯನಾಡ್ ಮತ್ತು ಮಂಗಳೂರು ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವ ಕಾರಣಕ್ಕಾಗಿ ಕಣ್ಣೂರನ್ನು ದಮ್ಮಾಂನಿಂದ ಮೊದಲ ಸೇವೆಗೆ ಆಯ್ಕೆ ಮಾಡಲಾಗಿದೆ ಎಂದು ಜಲೀಲ್ ಖಾಲಿದ್ ಹೇಳಿದರು. ಎಲ್ಲಾ ವಿಮಾನಗಳು ಯಶಸ್ವಿಯಾಗಿದ್ದು, ಕೇರಳದ ಇತರ ವಿಮಾನ ನಿಲ್ದಾಣಗಳಿಂದ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ದಮಾಮ್-ಕಣ್ಣೂರು ಮೊದಲ ವಿಮಾನಯಾನವನ್ನು ಬರಮಾಡಿಕೊಳ್ಳಲು ವಲಸಿಗರು ಹರ್ಷಗೊಂಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು