janadhvani

Kannada Online News Paper

ನಾಳೆ ಮಂಗಳೂರಿನಲ್ಲಿ ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್: ಯಶಸ್ವಿಗೆ ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ಕರೆ

ಮಂಗಳೂರು: ತಾರೀಕು 07-11-2019 ಗುರುವಾರದಂದು ಮಂಗಳೂರುನಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ವಿಜಯಗೊಳಿಸಲು ಕರ್ನಾಟಕ ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ ಅಧ್ಯಕ್ಷ ಅಶ್ರಫ್ ಸಅದಿ ಕರೆ ನೀಡಿದ್ದಾರೆ.

ಅಸಾಸ್ ನಲ್ಲಿ ನಡೆದ ಮಜ್ಲಿಸ್ ಅಹ್ಲ್ ಬದ್ರ್ ಸಂಗಮದಲ್ಲಿ ಮುಖ್ಯಪ್ರಭಾಷಣ ಮಾಡುತ್ತಿದ್ದ ಅವರು ಮಂಗಳೂರು ನೆಹರುಮೈದಾನದಲ್ಲಿ ನಾಲ್ಕು ಗುರುವಾರದಂದು ನಡೆಯುವ ಐತಿಹಾಸಿಕ ಹುಬ್ಬುರ್ರಸೂಲ್ ಸಮ್ಮೇಳನದ ಬಗ್ಗೆ ಪ್ರಸ್ಥಾಪಿಸಿದರು.

ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎಪಿ ಉಸ್ತಾದ್ ಸಹಿತ ಕೇರಳ ಕರ್ನಾಟಕದ ಉಲಮಾ ದಿಗ್ಗಜರು ಭಾಗವಹಿಸುವ ಪ್ರಸ್ತುತ ಸಮ್ಮೇಳನವನ್ನು ಕರ್ನಾಟಕದ ಸರ್ವ ಸುನ್ನೀ ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ಯಶಸ್ವಿಗೊಳಿಸಬೇಕೆಂದು ಅವರು ಜನತೆಗೆ ಕರೆ ನೀಡಿದರು.