ದುಬೈ: ಯುಎಇ ಯಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಾಧಿಕಾರಿ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಹಂಚಿಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ದುಬೈ ಆಡಳಿತಗಾರ ಸಾರ್ವಜನಿಕರಿಗೆ ನೀಡಿದ ಮುಕ್ತ ಪತ್ರದ ಬಳಿಕ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ದೇಶದ ಚಿತ್ರಣವನ್ನು ಕೆಡಿಸಬಾರದು ಎಂದು ಪತ್ರದಲ್ಲಿ ಸೂಚಿಸಲಾಗಿದ್ದು, 10 ನಿರ್ದೇಶನಗಳನ್ನೂ ಹೊರಡಿಸಿದ್ದಾರೆ.
ಅನುಸರಿಸಬೇಕಾದ 10 ಸಲಹೆಗಳು
- ಇತರರೊಂದಿಗೆ ವ್ಯವಹರಿಸುವಾಗ ಯುಎಇಯ ಸಂಸ್ಥಾಪಕ ಪಿತ ಮತ್ತು ಅವರ ತತ್ವಗಳಿಗೆ ಕಳಂಕ ನೀಡದೆ ಉತ್ತಮ ವ್ಯಕ್ತಿಯಾಗಿರಿ.
- ಜ್ಞಾನ, ಸಂಸ್ಕೃತಿ ಮತ್ತು ನಾಗರಿಕತೆಯ ಗುಣಮಟ್ಟ ಮತ್ತು ಆಧುನಿಕತೆಯನ್ನು ಪ್ರತಿಬಿಂಬಿಸುವ ವ್ಯಕ್ತಿತ್ವವನ್ನು ಹೊಂದಿರಿ.
- ಕೆಟ್ಟ ಭಾಷೆ ಅಥವಾ ಪದಗಳನ್ನು ಬಳಸದ ವ್ಯಕ್ತಿಯಾಗಿರಿ.
- ಯುಕ್ತಿಯೊಂದಿಗೆ ವ್ಯವಹರಿಸುವವರಾಗಿರಿ.
- ಒಳ್ಳೆಯ ಪದಗಳು ಮತ್ತು ಸುಂದರವಾದ ಚಿತ್ರಣವನ್ನು ಗೌರವಿಸುವ ಮತ್ತು ಸಕಾರಾತ್ಮಕ ಆಲೋಚನೆಗಳು, ಸಂಸ್ಕೃತಿಗಳು ಮತ್ತು ಸಮಾಜದೊಂದಿಗೆ ಸಂವಹನ ನಡೆಸುವ ವ್ಯಕ್ತಿತ್ವ ನಿಮ್ಮದಾಗಿರಲಿ.
- ದೇಶವನ್ನು ಶ್ರೀಮಂತಗೊಳಿಸುವ ಮಾಹಿತಿ, ಆಲೋಚನೆಗಳು, ಸಾಮಾಜಿಕ ಮತ್ತು ಮಾನವೀಯ ಉಪಕ್ರಮಗಳನ್ನು ಹಂಚಿಕೊಳ್ಳುವ ಮೂಲಕ ಇತರರಿಗೆ ಸಹಾಯ ಮಾಡುವ ವ್ಯಕ್ತಿಯಾಗಿರಿ.
- ಅಂತರ್ರಾಷ್ಟ್ರೀಯ ಪರಿಸರಗಳೊಂದಿಗೆ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳಿರಿ.
- ಇತರ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಆತ್ಮವಿಶ್ವಾಸವನ್ನು ಬೆಳೆಸುವವರಾಗಿರಿ.
- ಇತರರೊಂದಿಗೆ ಪ್ರೀತಿ ಮತ್ತು ಮುಕ್ತತೆಯನ್ನು ಪ್ರತಿಬಿಂಬಿಸುವಂತಾಗಿರಿ.
- ಜನರನ್ನು ಆಧರಿಸುವುದು ಮತ್ತು ಯಾವಾಗಲೂ ಆ ಬಗ್ಗೆ ಹೆಮ್ಮೆ ಇರುವವರಾಗಿರಿ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು