janadhvani

Kannada Online News Paper

ಸಅದಿಯ್ಯ ಗೋಲ್ಡನ್ ಜೂಬಿಲಿ ಕನ್ವೆನ್ಶನ್ ಹಾಗೂ ಸ್ವಾಗತ ಸಮಿತಿ ರಚನೆ

ಮಂಗಳೂರು: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಸುವರ್ಣ ಮಹೋತ್ಸವ ಗೋಲ್ಡನ್ ಜೂಬಿಲಿ ಯು ಇದೇ ಬರುವ ಡಿಸೆಂಬರ್ 27,28,29 ದಿನಾಂಕಗಳಲ್ಲಿ ನಡೆಯಲಿದ್ದು ಅದರ ಪ್ರಯುಕ್ತ ದ.ಕ ಜಿಲ್ಲಾ ಮಟ್ಟದ ಕನ್ವೆನ್ಶನ್ ಹಾಗೂ ಸ್ವಾಗತ ಸಮಿತಿ ರಚನೆ ಯು ಮಂಗಳೂರಿನ ಸೂರ್ಯ ಹೋಟೆಲ್ ಸಭಾಂಗಣದಲ್ಲಿ ಹಿರಿಯ ವಿದ್ವಾಂಸ ಬಹು ಯು ಕೆ ಮುಹಮ್ಮದ್ ಸಅದಿ ಮಠ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಅದಿಯ್ಯ ಪ್ರಿನ್ಸಿಪಾಲ, ಜಂಇಯ್ಯತುಲ್ ರಾಜ್ಯಾಧ್ಯಕ್ಷ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಉದ್ಘಾಟಿಸಿದರು. ಸಅದಿಯ್ಯ ಅಧ್ಯಕ್ಷರಾದ ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್ ಮುಖ್ಯ ಅತಿಥಿ ಯಾಗಿ ಮಾತನಾಡಿದರು.

ಸಅದಿಯ್ಯ ಕಾರ್ಯದರ್ಶಿ ಕೆ ಪಿ ಹುಸೈನ್ ಸಅದಿ ಕೆಸಿರೋಡ್ ವಿಷಯ ಮಂಡಿಸಿದರು.ಎಸ್ ಪಿ ಹಂಝ ಸಖಾಫಿ ಬಂಟ್ವಾಳ,
ಡಾ ಎಮ್ಮೆಸ್ಸೆಎಮ್ ಝೈನಿ ಕಾಮಿಲ್, ಅಬ್ದುಲ್ ರಹಿಮಾನ್ ಮದನಿ ಜೆಪ್ಪು, ಕೆಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ , ಎಂಪಿಎಂ ಅಶ್ರಫ್ ಸಅದಿ ಮಲ್ಲೂರು
ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಂತಾದವರು ಮಾತನಾಡಿದರು.

ಜಿಲ್ಲಾ ಸಅದೀಸ್ ಅಧ್ಯಕ್ಷ ಯೂಸುಫ್ ಸಅದಿ ಮಠ ,ಇಸ್ಮಾಯಿಲ್ ಸಅದಿ ಕಿನ್ಯ, ಹಾಜಿ ಅಬ್ದುಲ್ ರಝಾಕ್ ಮಲಾರ್, ಹಾಜಿ ಮೊಯಿದೀನ್ ಅಲ್ ಸಫರ್, ಪಿ ಎಂ ಮುಹಮ್ಮದ್ ಮದನಿ ಕೆಸಿರೋಡ್, ಇಬ್ರಾಹಿಮ್ ಸಖಾಫಿ ಸೆರ್ಕಳ, ಅಡ್ವಕೇಟ್ ಶಾಕಿರ್ ಮಿತ್ತೂರು, ಮುಸ್ತಫ ಮಾಸ್ಟರ್ ಉಳ್ಳಾಲ, ಖಲೀಲ್ ಮುಸ್ಲಿಯಾರ್ ಬೋಳಂತೂರು, ರಿಯಾಝ್ ಸಅದಿ ಗುರುಪುರ, ಹನೀಫ್ ಸಅದಿ ಬದ್ಯಾರ್,ಮುಂತಾದವರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ದ.ಕ ಜಿಲ್ಲಾ ಸ್ವಾಗತ ಸಮಿತಿ ರಚಿಸಿದ್ದು ಚೇರ್ಮಾನ್ ಆಗಿ ಹಾಜಿ ಅಬ್ದುಲ್ ರಝಾಕ್ ಮಲಾರ್ ಜನರಲ್ ಕನ್ವೀನರ್ ಆಗಿ ಹಾಫಿಳ್ ಯಾಕೂಬ್ ಸಅದಿ ನಾವೂರು ಕೋಶಾಧಿಕಾರಿಯಾಗಿ ಹಾಜಿ ಮೊಯಿದೀನ್ ಅಲ್ ಸಫರ್, ಕೋಆರ್ಡಿನೇಟರ್ ಆಗಿ ಅಶ್ರಫ್ ಕಿನಾರ ವರ್ಕಿಂಗ್ ಚೇರ್ಮಾನ್ ಆಗಿ ಇಸ್ಮಾಯಿಲ್ ಸಅದಿ ಉರುಮಣೆ ಹಾಗೂ ಇತರ 99 ಮಂದಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ ಅಶ್ರಫ್ ಕಿನಾರ ವಂದಿಸಿದರು ಇಸ್ಮಾಯಿಲ್ ಸಅದಿ ಉರುಮಣೆ ಕಾರ್ಯಕ್ರಮ ನಿರೂಪಿಸಿದರು.