janadhvani

Kannada Online News Paper

ಕಾಫಿ ಕೃಷಿಯ ತವರೂರಲ್ಲಿ ಯಶಸ್ವಿಯಾದ ಎಸ್ಸೆಸ್ಸೆಫ್ Qteam ZACVIK

ಬಾಳೆಹೊನ್ನೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ಸಕ್ರೀಯ ಕಾರ್ಯಕರ್ತರ ತಂಡ ಕ್ಯು ಟೀಂ ಇದರ ಚಿಕ್ಕಮಗಳೂರು ಜಿಲ್ಲಾ ಮಟ್ಟದ ZACVIK ಕಾರ್ಯಕ್ರಮ ಬಾಳೆಹೊನ್ನೂರು ಮಂಝಿಲ್ ಅಕಾಡೆಮಿಯಲ್ಲಿ ಅದ್ದೂರಿಯಾಗಿ ನಡೆಯಿತು.

ಜಿಲ್ಲಾಧ್ಯಕ್ಷ ಸಫ್ವಾನ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ಸಭೆಯನ್ನು ಉದ್ಘಾಟಿಸಿದರು.ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಹಾಗೂ ರಾಜ್ಯ ನಾಯಕ ನೌಫಲ್ ಸಖಾಫಿ ಕಳಸ ಕ್ಯು ಟೀಂ ಗುರಿ ಹಾಗೂ ಕಾರ್ಯಾಚರಣೆಯ ರೂಪುರೇಷೆಗಳ ಬಗ್ಗೆ ವಿಷಯ ಮಂಡಿಸಿದರು.

ರಾಜ್ಯ ನಾಯಕ ಸಫ್ವಾನ್ ವಿಜಯಪುರ, ಜಿಲ್ಲೆಯ ಸಂಘಟನಾ ನಾಯಕರಾದ ಉಸ್ಮಾನ್ ಹಂಡುಗುಳಿ, ಮುನೀರ್ ಚಿಕ್ಕಮಗಳೂರು, ಆಬಿದ್ ಸಖಾಫಿ ಮಾಗುಂಡಿ, ಶಾಹಿನ್ ಚಿಕ್ಕಮಗಳೂರು, ಅಬ್ದುಲ್ ಅಝೀಝ್ ಮಾಗುಂಡಿ ಹಾಗೂ ಇನ್ನಿತರರು ಭಾಗವಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಫುದ್ದೀನ್ ಕುದ್ರೆಗುಂಡಿ ಸ್ವಾಗತಿಸಿ ವಂದಿಸಿದರು.