janadhvani

Kannada Online News Paper

ಮುಡಿಪು ಡಿವಿಶನ್ : ನಾಳೆ ಹಳೆಬೇರು ಹೊಸಚಿಗುರು ಕಾರ್ಯಕ್ರಮ

ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಹಳೆಬೇರು ಹೊಸಚಿಗುರು ಕಾರ್ಯಕ್ರಮವು ಡಿವಿಶನ್ ಅಧ್ಯಕ್ಷ ತೌಸೀಫ್ ಸ‌ಅದಿ ಹರೇಕಳರವರ ಅಧ್ಯಕ್ಷತೆಯಲ್ಲಿ 26-9-18 ರಂದು ಫರೀದ್ ನಗರ ಆಫೀಸಿನಲ್ಲಿ 7 pm ಗೆ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಜಮಾಲ್ ಸಖಾಫಿ ಮುದುಂಗಾರ್‌ಕಟ್ಟೆ ಕಾರ್ಯಕ್ರಮ ಉದ್ಘಾಟಿಸುವರು. ಇಸ್‌ಹಾಕ್ ಝುಹ್ರಿ ಸೂರಿಂಜೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.

ಡಿವಿಶನ್ ಗಾಗಿ ದಶಕಗಳಿಂದೀಚೆಗೆ ನಾಯಕತ್ವ ನೀಡಿದ ಉಮರ್ ಅಹ್ಸನಿ ಇನೋಳಿ,ಎಂಎಂಕೆ ಕಡ್ವಾಯಿ,ಹೈದರ್ ಸಖಾಫಿ ಇನೋಳಿ, ಅಝೀಝ್ ಮದನಿ, ಹೈದರಲಿ ಹಿಮಮಿ ಮಲಾರ್, ಶರೀಫ್ ಸ‌ಅದಿ ಅರಫಾ, ಅಶ್ರಫ್ ಸ‌ಅದಿ ಪಡಿಕ್ಕಲ್, ಇಸ್ಮಾಈಲ್ ಮಾಸ್ಟರ್ ಮಜೀದ್ ಫರೀದ್ ನಗರ,ಅಝೀಝ್ ಹೆಚ್ ಕಲ್, ಹಮೀದ್ ಬಂಡಸಾಲೆ,
ಅಬ್ದುರ್ರಹ್ಮಾನ್ ಮಾಸ್ಟರ್, ಅಶ್ರಫ್ ಹರೇಕಳ,ನಝೀರ್ ಮುಡಿಪು ಮುಂತಾದವರು ಅನುಭವ ಹಂಚಿಕೊಳ್ಳುವರು ಎಂದು ಡಿವಿಶನ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್‌ನಗರ ತಿಳಿಸಿದ್ದಾರೆ.