ಮುಂಡಾಜೆ: ಇಲ್ಲಿನ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಪ್ರವಾಹ ಸಂತ್ರಸ್ತರಿಗೆ ಧನಸಂಗ್ರಹಿಸುವ ಮೂಲಕ ಸಾಂತ್ವನ ಮತ್ತು ಈ ಬಾರಿ ಸಂಭ್ರಮ ಆಡಂಬರ ಇಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಬಕ್ರೀದ್ ಹಬ್ಬ ಆಚರಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಕಾಜೂರು ತಂಙಳ್ ನಿರ್ದೇಶನದಂತೆ ರಾಜ್ಯ ಸುನ್ನೀ ಕೋರ್ಡಿನೇಶನ್ ಕಮಿಟಿ ಬ್ಯಾನರ್ ನಡಿ ಸಂತ್ರಸ್ತರ ನಿಧಿಗೆ ದೇಣಿಗೆ ಸಂಗ್ರಹಿಸಲಾಯಿತು.
ಜಮಾಅತ್ ಖತೀಬ್ ಇಬ್ರಾಹಿಂ ಸಖಾಫಿ ಕಬಕ ಬಕ್ರೀದ್ ಖುತುಬ ಪಾರಾಯಣ ಮತ್ತು ನಮಾಝ್ ಗೆ ನೇತೃತ್ವ ನೀಡಿದರು.
ಜಮಾಅತ್ ಅಧ್ಯಕ್ಷ ಹಮೀದ್ ನೆಕ್ಕರೆ, ಕಾರ್ಯದರ್ಶಿ ಲೆತೀಫ್, ಕೋಶಾಧಿಕಾರಿ ಮುಹಮ್ಮದ್ ಜೈ ಭಾರತ್, ಸ್ಥಾಪಕಾಧ್ಯಕ್ಷ ಅಶ್ರಫ್ ಆಲಿಕುಂಞಿ, ಮಸ್ಲಕ್ ಸಮಿತಿ ಕಾರ್ಯಾಧ್ಯಕ್ಷ ಹಾಜಬ್ಬ,ಕಾರ್ಯದರ್ಶಿ ಶಬೀರ್, ಸಹಾಯಕ ಧರ್ಮಗುರು ಸಿದ್ದೀಕ್ ಸಖಾಫಿ ಹಿಮಮಿ, ಸಮಿತಿ ಪ್ರಮುಖರಾದ ಉಸ್ಮಾನ್ ಕೂಳೂರು, ರಮ್ಲ ನೆಕ್ಕರೆ, ಕೆರೀಂ ಕೆ.ಎಸ್, ಕೆರೀಂ ಕುರುಡ್ಯ, ಅಬ್ಬಾಸ್, ಸಿದ್ದೀಕ್ ನೆಕ್ಕರೆ, ಇಬ್ರಾಹಿಂ ಕುರುಡ್ಯ, ಎಂಡಿಸಿ ಪ್ರಮುಖರಾದ ಇಬ್ರಾಹಿಂ ಚೆನ್ನಿಗುಡ್ಡೆ, ಪ್ರಮುಖರಾದ ಪುತ್ತಾಕ ಕೂಳೂರು, ಸಿದ್ದೀಕ್ ಸಾಗರ್, ಬಶೀರ್, ಹಮೀದ್ ದರ್ಖಾಸು, ಶರೀಫ್ ನೆಕ್ಕರೆ, ಝಕರಿಯ, ಇಸ್ಮಾಯಿಲ್ ದರ್ಖಾಸ್, ಅಬೂಬಕ್ಕರ್ ಕೂಳೂರು, ಅಬ್ದುಲ್ಲ ಎಸ್, ಅಯೂಬ್ ಆಲಿಕುಂಞಿ ಹಾಗೂ ಮದರಸ ವೇಳೆ ವಿದ್ಯಾರ್ಥಿ ಸಂಘಟನೆ ಎಸ್ ಬಿಎಸ್ ಪದಾಧಿಕಾರಿಗಳು ಭಾಗಿಯಾಗಿದ್ದರು.
ಸಾಮೂಹಿಕ ಪ್ರಾರ್ಥನೆ;
ಇದೇ ಸಂದರ್ಭದಲ್ಲಿ ಜಮಾಅತ್ ನಿಂದ ಅಗಲಿದ ವ್ಯಕ್ತಿಗಳು ಹಾಗೂ ಸುನ್ನೀ ನಾಯಕರುಗಳ ಸ್ಮರಣೆಗೈದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ