janadhvani

Kannada Online News Paper

ಅಬ್ಬಾಸ್ ಮುಸ್ಲಿಯಾರ್ ನಿಧನ : ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಸಂತಾಪ

ಮಂಗಳೂರು:ಆಧುನಿಕ ಮಂಜನಾಡಿ ಯ ಶಿಲ್ಪಿ ಎಂದೇ ಹೇಳಲಾಗುವ ಆಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಸ್ಥಾಪಕರಾದ, ಹಿರಿಯ ವಿದ್ವಾಂಸ, ಧಾರ್ಮಿಕ ನೇತಾರ, ವಾಗ್ಮಿ, ಶಿಕ್ಷಣ ತಜ್ಞ, ದೀನೀ  ಸಮೂಹ ಸಂಸ್ಥೆಗಳ ರೂವಾರಿಯಾದ ಆಲ್ ಹಾಜ್ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅವರ ವಿಯೋಗ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.ಅಬ್ಬಾಸ್ ಮುಸ್ಲಿಯಾರ್ ರವರು ಓರ್ವ ವ್ಯಕ್ತಿ ಅನ್ನೋದಕ್ಕಿಂತ ಅವರು ಒಂದು ಸಮಗ್ರ ಸಂಸ್ಥೆಯಾಗಿದ್ದರು.

ಮುಸ್ಲಿಯಾರ್ ರವರ ಶಿಕ್ಷಣ ಸೇವೆ ಸಮುದಾಯಕ್ಕೆ ಮಾದರಿ ಯಾಗಿದೆ. ಅವರ ನಿಧನಕ್ಕೆ ತೀವ್ರ ಸಂತಾಪ ಸಲ್ಲಿಸಲಾಗುತ್ತಿದೆ. ಅಲ್ಲಾಹನು ಅವರಿಗೆ ಸದ್ಗತಿಯನ್ನು ದಯಪಾಲಿಸಲಿ. ಮೃತರ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ಅವರ ವಿಯೋಗವನ್ನು ತಡೆಯುವ ಶಕ್ತಿ ನೀಡಲಿ.
ಕೆ.ಅಶ್ರಫ್
ಮಾಜಿ ಮೇಯರ್
ಅಧ್ಯಕ್ಷರು
ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ